ಇಂದು ಚಳ್ಳಕೆರೆಯಲ್ಲಿ ಕೋವಿಡ್ 19 ಎರಡನೇ ಅಲೆ ಪ್ರಯುಕ್ತ ಚಳ್ಳಕೆರೆಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಿ.ಶ್ರೀರಾಮುಲು ಜನಸ್ಪಂದನ ಸಮಿತಿ ವತಿಯಿಂದ ಮೊದಲದಿನವಾದ ದಿನವಾದ ಇಂದು ಚಳ್ಳಕೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜ್ಯೋತಿಪ್ರಕಾಶ್ ರವರು ರಸ್ತೆ ಬದಿಯ ಬಿಕ್ಷುಕರಿಗೆ ಹಾಗೂ ಹಸಿದವರಿಗೆ ಸುಮಾರು 200 ಜನರಿಗೆ ಪೊಟ್ಟಣಗಳಲ್ಲಿ ಮಧ್ಯಾಹ್ನದ ಊಟ, ನೀರುನ್ನು ವಿತರಿಸಲಾಯಿತು. ಲಾಕ್ ಡೌನ್ ನಲ್ಲಿ ಹೋಟೆಲ್ ಇಲ್ಲದ ಕಾರಣ ಸಾರ್ವಜನಿಕರು ಹಸಿವಿನಿಂದ ಹೊಟ್ಟೆ ಕಟ್ಟಿ ಜೀವನ ಮಾಡುತ್ತಿದ್ದಾರೆ.ಅವರ ಹಸಿವನ್ನು ನೀಗಿಸುವ ಸಣ್ಣ ಕಾರ್ಯ ಎಂದರು.ಈ ಸಂದರ್ಭದಲ್ಲಿ ಕಾಲುವೇಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಾಲುವೇಹಳ್ಳಿ ಪಾಲಯ್ಯ ಆರ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜ್ಯೋತಿಪ್ರಕಾಶ್ ಮತ್ತಿತರರು,ಬಿ ಶ್ರೀರಾಮುಲು ಜನಸ್ಪಂದನ ಸಮಿತಿ* ಸದಸ್ಯರಾದ ಜಗದೀಶ್, ಮಂಜುನಾಥ್, ಸಚಿನ್, ರಂಗಸ್ವಾಮಿ, ಸೂರ್ಯ, ಕಿರಣ್, ಮೂರ್ತಿ. ತಿಮ್ಮರಾಜ್, ಶಿವರಾಜ್, ಹರೀಶ್, ಹೊನ್ನೂರಸ್ವಾಮಿ,ಜಾಲಪ್ಪ, ಉಪಸ್ಥಿತರಿದ್ದರು..
ವರದಿ.ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030