ದಿನಾಂಕ 8/62021 ರಂದು ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಡಿಎಸ್ಎಸ್ ಕೂಡ್ಲಿಗಿ ತಾಲೂಕು ಸಮಿತಿ ಯಿಂದ ದಲಿತರಿಗೆ ಕೋವಿಡ್ ಪರಿಹಾರದ ಪ್ಯಾಕೇಜ್ ಕುರಿತು ಜಾರಿಗಾಗಿ ಮತ್ತು 2021-2022 ನೇ ಉಪಯೋಜನೆಗಳ ಬಜೆಟ್ ಅನುದಾನ ರೂ 26005 ಕೋಟಿ ರೂಪಾಯಿಗಳ ಅನುಷ್ಠಾನ ಗೊಳಿಸಲು ಕೋವಿಡ್ 19..2ನೇ ಅಲೆ ಮತ್ತು ಮೂರನೇ ಅಲೆ ಹೀಗೆ ಮುಂದುವರೆಯುವ ಸಾಂಕ್ರಾಮಿಕ ರೋಗವನ್ನು ಎದುರಿಸಲು ದಲಿತರಿಗೆ ಆಹಾರ ಆರೋಗ್ಯ ಬದುಕಲು ಉದ್ಯೋಗಕ್ಕಾಗಿ ದಲಿತರ ಕೋವಿಡ್ ಪರಿಹಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ಕಾನಹೊಸಹಳ್ಳಿ ನಾಡಕಚೇರಿಯ ಉಪತಹಸೀಲ್ದಾರರು ಚಂದ್ರಮೋಹನ್ ರವರ ಮೂಲಕ ಕೂಡ್ಲಿಗಿ ತಾಲೂಕು ತಹಸೀಲ್ದಾರರಾದ ಟಿ ಜಗದೀಶ್ ರವರ ಮುಖಾಂತರ ಸನ್ಮಾನ್ಯ ಶ್ರೀ ಬಿಎಸ್ ಯಡಿಯೂರಪ್ಪನವರು ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ ಮತ್ತು ಸನ್ಮಾನ್ಯ ಶ್ರೀ ,ಬಿ ಶ್ರೀರಾಮುಲು ಸಮಾಜ ಕಲ್ಯಾಣ ಸಚಿವರು ಹೊಸಹಳ್ಳಿ ನಾಡಕಚೇರಿಯಲ್ಲಿ ಮನವಿ ಸಲ್ಲಿಸಿಲಾಯಿತು. ದಲಿತ ಹಕ್ಕುಗಳ ಸಮಿತಿ ಕೂಡ್ಲಿಗಿ ತಾಲೂಕು ಸಮಿತಿ ಸಂಚಾಲಕರು. ಹೆಚ್.ಡಿ .ಚಂದ್ರಪ್ಪ. ಬಸವರಾಜ, ಹೊನ್ನೂರು ಸ್ವಾಮಿ,ತಿಪ್ಪೇಸ್ವಾಮಿ, ನಾಗರಾಜ,ಶಿವಣ್ಣ ,ಹೊನ್ನಪ್ಪ , ಹೇಮಣ್ಣ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
*ವರದಿ ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030