ಜಯ ಕರ್ನಾಟಕ ಮನವಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯ ಕಲ್ಯಾಣ ಇಲಾಖೆ
ಸುರುಪುರು: ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿ.ಎನ್ ಜಗದೀಶ ಅಣ್ಣನವರ ಹಾಗೂ ಯಾದಗಿರಿ ಜಿಲ್ಲಾ ಅಧ್ಯಕ್ಷರರಾದ ಬಿ.ಎನ್ ವಿಶ್ವನಾಥ ನಾಯಕರವರ ಆದೇಶದ ಮೇರೆಗೆ ಸುರುಪುರು ತಾಲೂಕ ಅಧ್ಯಕ್ಷರಾದ ರವಿ ನಾಯಕ ಬೈರಿಮರಡಿ ನೇತೃತ್ವದಲ್ಲಿ ಹಾಗೂ ಸಂಘಟನೆಯ ಪದಾಧಿಕಾರಿಗಳ ಸಮ್ಮುಖದಲ್ಲಿ ದಿನಾಂಕ 05-06-2021 ರಂದು ಸುರುಪುರು ನಗರದ ಬಿ.ಸಿ.ಎಂ ಹಾಸ್ಟೇಲಿನ ಕೋವಿಡ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಧಿಕಾರಿಗಳ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ….ಈ ಪ್ರತಿಭಟನೆಗೆ ಸ್ಪಂದಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡಾ.ಎಮ್.ಎಮ್.ರಾಹಿಲ್ ವೈದ್ಯಾಧಿಕಾರಿಯನ್ನು ಬೆಂಡೆಗೊಂಬಳ್ಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ..ತಮ್ಮ ಆದೇಶಕ್ಕೆ ನಮ್ಮ ಸಂಘಟನೆಯ ವತಿಯಿಂದ ತುಂಬು ಹೃದಯದ ಧನ್ಯವಾದಗಳು..
ವರದಿ. ಮುಕ್ಕಣ್ಣ ಹುಲಿಗುಡ್ಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030