ಕರ್ನಾಟಕದ ಸಿಂಗಂ ರವಿ ಚೆನ್ನಣ್ಣನವರ್ ರವರೆಗೆ ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಕಿರೀಟ..
ಕರ್ನಾಟಕದ ಸಿಂಗಂ ಎಂದೇ ಹೆಸರಾಗಿರುವ ದಕ್ಷ ಪೊಲೀಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರು
ಕೆಎಸ್ಪಿಯಲ್ಲಿ 13 ವರ್ಷಗಳ ಸೇವೆಯ ನಂತರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಡ್ತಿ ಪಡೆದ ಸಂದರ್ಭ ಒಂದು ಉನ್ನತ ಮಟ್ಟದ ಅಧಿಕಾರಕ್ಕೇರಲು ಈದಿನ ಸಾಕ್ಷಿಯಾಯಿತು .ಕರ್ನಾಟಕಕ್ಕೆ ಅಚ್ಚುಮೆಚ್ಚಿನ ಪೋಲಿಸ್ ಅಧಿಕಾರಿಯಾಗಿ ಜನರ ಸ್ಪಂದನೆ ಮೂಲಕ ಅಧಿಕಾರದ ಮೂಲಕ ಅಧಿಕಾರವನ್ನು ಜನರಿಗೆ ಮನಮುಟ್ಟುವಂತೆ ಕಾರ್ಯಗಳನ್ನು ಮಾಡಿದಂತಹ ಕೀರ್ತಿ ರವಿ ಚನ್ನಣ್ಣನವರ್ ರವರಿಗೆ ಸಲ್ಲುತ್ತದೆ .ಅಧಿಕಾರದ ಜತೆಗೆ ವಿದ್ಯಾರ್ಥಿಗಳನ್ನು ಉನ್ನತ ಮಟ್ಟದ ಅಧಿಕಾರಕ್ಕೇರಲು ಹಲವಾರು ರೀತಿಯ ತರಬೇತಿಗಳನ್ನು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತಹ ಮಾರ್ಗಸೂಚಿಗಳನ್ನು ಅಚ್ಚುಮೆಚ್ಚಿನ ರೀತಿಯಲ್ಲಿ ತಿಳಿಸುವಂತಹ ಸಹನೆ ಪೋಲಿಸ್ ಅಧಿಕಾರಿಯಾದ ರವಿ ಚೆನ್ನಣ್ಣನವರ್ ರವರದು .ಇಂತಹ ಅಧಿಕಾರಿಗೆ ಉನ್ನತ ಹುದ್ದೆ ಬಡ್ತಿ ಮೂಲಕ ದೊರಕಿರುವುದು ಕರ್ನಾಟಕ ರಾಜ್ಯಕ್ಕೆ ಕನ್ನಡಿಗರಿಗೆ ಒಂದು ಸಂತಸದ ವಿಷಯವಾಗಿದೆ .ಇಂತಹ ಅತ್ಯುತ್ತಮ ಬಡ್ತಿಯನ್ನು ಹೊಂದಿದ ರವಿ ಸರ್ ರವರಿಗೆ ಎಚ್ಚರಿಕೆ ಪತ್ರಿಕೆಯ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು….
ವರದಿ. ಮಂಜುನಾಥ್, ದೊಡ್ಡಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030