ಇಮ್ಮಡಾಪುರ:ಎಸ್ಸಿಕಾಲೋನಿಯ ಗ್ರಾಮನತ್ತು ಭೂಮಿ ತೆರವುಗೊಳಿಸಿ-ದಲಿತರ ಒತ್ತಾಯ.
-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಇಮ್ಮಡಾಪುರ ಗ್ರಾಮದಲ್ಲಿ,ದಲಿತರ ಕಾಲೋನಿಗೆ ಹೊಂದಿಕೊಂಡಿರುವ ಗ್ರಾಮನತ್ತು ಭೂಮಿಯನ್ನು. ಅನ್ಯಕೋಮಿನವರು ಒತ್ತುವರಿ ಮಾಡಿದ್ದು ಅದನ್ನು ತೆರವುಗೊಳಿಸುವಂತೆ ಕ್ರಮಕ್ಕಾಗಿ, ತಹಶಿಲ್ದಾರರಿಗೆ ದಲಿತರು ಹಾಗೂ ಗ್ರಾಮಸ್ಥರು ಒತ್ತಾಯಿಸಿದರು. ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಮ್ಮಡಾಪುರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಕಾಲೋನಿಯ ನಿವಾಸಿಗಳು, ಮಾತನಾಡಿ ಸರ್ವೇನಂ 99/4ರ ಪೈಕಿ ಗ್ರಾಮನತ್ತು ಭೂಮಿಯು 5.75ವಿಸ್ತೀರ್ಣ ಇದ್ದು,ಇದನ್ನು ಹೊಂದಿಕೊಂಡಿರುವ ಜಮೀನಿನ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಮತ್ತು ಸ್ಥಳದಲ್ಲಿ ಹೊಂದಿಕೊಂಡಿರುವ ಸ್ಥಳದಲ್ಲಿ ಗಲೀಜ್ ಮಾಡಿದ್ದು,ತ್ಯಾಜ್ಯ ನೀರು ಹರಿಸಿ ದೇವಸ್ಥಾನ ಕ್ಕೆ ಅಂಗಳ ಹಾಗೂ ಸಾರ್ವಜನಿಕ ದಾರಿಯನ್ನ ಅಸ್ಥವ್ಯಸ್ಥಗೊಳಿಸಿದ್ದಾರೆ.ಇದರಿಂದಾಗಿ ಗ್ರಾಮಸ್ಥರಿಗೆ ಹಾಗೂ ದಲಿತ ಕಾಲೋನಿ ಜನರು ಸಂಚರಿಸುವುದಕ್ಕೂ ಪರದಾಡುವಂತಾಗಿದೆ,ಹೊಂದಿಕೊಂಡಿರುವ ವ್ಯಕ್ತಿಗಳ ಉಪಠಳದಿಂದಾಗಿ ದಲಿತರೆಲ್ಲರಿಗೂ ತೀವ್ರ ತೊಂದರೆಯಾಗುತ್ತಿದೆ ಎಂದು ದಲಿತರು ದೂರಿದ್ದಾರೆ.ತಮ್ಮ ಹಕ್ಕೋತ್ತಾಯವನ್ನು ತಹಶಿಲ್ದಾರರಾದ ಟಿ.ಜಗದೀಶ ರವರಿಗೆ ಕ್ರಮಕ್ಕಾಗಿ,ದಲಿತರು ಹಾಗೂ ಗ್ರಾಮಸ್ಥರು ತಮ್ಮ ಹಕ್ಕೊತ್ತಾಯ ಮಾಡಿದ್ದಾರೆ.ತಹಶಿಲ್ದಾರರಾದ ಟಿ.ಜಗದೀಶ ಹಕ್ಕೊತ್ತಾಯ ಪತ್ರ ಪಡೆದು ಮಾತನಾಡಿ,ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ದಲಿತ ಮುಖಂಡ ಹಾಗೂ ಗ್ರಾಪಂ ಸದಸ್ಯ ನಾಗರಾಜ,ಸೇರಿದಂತೆ ದಲಿತರಾದ ಬಿ.ಚೌಡಪ್ಪ,ಸಿದ್ದಪ್ಪ,ನಾಗಪ್ಪ,ಸಿದ್ದಲಿಂಗಪ್ಪ,ನಾಗರಾಜಪ್ಪ,ಅಂಜಿನಪ್ಪ,ಹೊನ್ನೂರಪ್ಪ,ಮಹೇಶ,ಸಂಗಪ್ಪ,ಕೊಲ್ಲಪ್ಪ,ಸಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030