ದಿನಾಂಕ 10-06-2021 ರಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿಯ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಸಂಚಾಲಕರಾದ ಶ್ರೀಯುತ ಕಾಡಶೆಟ್ಟಿಹಳ್ಳಿ ಸತೀಶ್ ರವರ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ದಾವಣಗೆರೆ ಜಿಲ್ಲೆಯ ಸಭೆಯಲ್ಲಿ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮ ಪಂಚಾಯತಿಯ ಹಿರಿಯರು ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಆದ ಶ್ರೀ ಕೆಂಚಪ್ಪ ಕೆ.ಸಿ ಇವರನ್ನ ಸಂಚಾಲಕರಾಗಿ ಮತ್ತು ದಾಗಿನಕಟ್ಟೆ ಗ್ರಾಮ ಪಂಚಾಯತಿಯ ಅಧ್ಯಕ್ಷರು ಆದ ಶ್ರೀಮತಿ ಪಲ್ಲವಿಕಿರಣ್ ಇವರನ್ನ ಸಹ ಸಂಚಾಲಕರಾಗಿ ಚನ್ನಗಿರಿ ತಾಲೂಕಿಗೆ ಆಯ್ಕೆ ಯಾಗಿದ್ದಾರೆ. ಇವರಿಗೆ ತಮ್ಮೆಲ್ಲರ ಪರವಾಗಿ ಹಾಗು ತರಬೇತಿಯ ಸುಗಮಗರರಾದ
ಶ್ರೀ ಯುವರಾಜ ಎಂ ಜೆ .ಮತ್ತು ಶ್ರೀಮತಿ ಚಂದ್ರಕಲಾ ಇವರಿಂದ ಹೃತ್ಪೂರ್ವಕ ಧನ್ಯವಾದಗಳು..
ವರದಿ.ರೇಖಾ, ಆರ್, ಲಿಂಗಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030