ಕೈ ಪಾಳಯಕ್ಕೆ ಬೇಷರತ್ ಬೆಂಬಲ
ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಲತಾ ಮಲ್ಲಿಕಾರ್ಜುನ್ ಕಾಂಗ್ರೆಸ್ ನ ಅದರ್ಶವನ್ನೆ ನಂಬಿಕೊಂಡು ಬಂದಿರುವ ಕುಟುಂಬದವರು ಹೀಗಾಗಿ ಬೇಷರತ್ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಸುರ್ಜೆವಾಲ ಅವ್ರು ಲತಾ ಮಲ್ಲಿಕಾರ್ಜುನ ಅವರು ತಮ್ಮ ಸೈದ್ಧಾಂತಿಕ ಬೇರುಗಳು ಮತ್ತು ಕಾಂಗ್ರೆಸ್ ಆದರ್ಶಗಳಿಗೆ ಬದ್ಧತೆಯನ್ನು ಪರಿಗಣಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ನೀಡಿದ್ದಾರೆ. ಅದ್ದರಿಂದ ನಾನು ಅವರಿಗೆ, ಅವರ ಪತಿ ಮಲ್ಲಿಕಾರ್ಜುನ್ ಮತ್ತು ಎಲ್ಲಾ ಬೆಂಬಲಿಗರು ಮತ್ತು ಹಿತೈಷಿಗಳಿಗೆ ಧನ್ಯವಾದಗಳು ತಿಳಿಸುತ್ತೆನೆ. ನಾವು 6.5 ಕೋಟಿ ಕನ್ನಡಿಗರಿಗೆ ಒಟ್ಟಾಗಿ ಸೇವೆ ಸಲ್ಲಿಸುತ್ತೇವೆ” ಎಂದು ಸುರ್ಜೇವಾಲಾ ಭರವಸೆಯನ್ನ ನೀಡಿದ್ರು..
ಇನ್ನು ಇಷ್ಟೆ ಅಲ್ಲದೇ ಲತಾ ಮಲ್ಲಿಕಾರ್ಜುನ ಅವರು ದಿವಂಗತ ಎಂ.ಪಿ.ಪ್ರಕಾಶ್ ಅವರ ಮಗಳು ಸಹ ಇವರು ಹಿರಿಯ ಸಮಾಜವಾದಿ ಮತ್ತು ಜನತಾ ಪರಿವಾರದ ನಾಯಕರಾಗಿದ್ದರು. ಇವರ ಮಗ ಅವರ ಮಗ ಎಂಪಿ ರವೀಂದ್ರ ನಿಧಾನರಾದ ಬಳಿಕ 2018ರಲ್ಲಿ ಲತಾ ಮಲ್ಲಿಕಾರ್ಜುನ ಕಾಂಗ್ರೆಸ್ಗೆ ಸೇರಿದ್ದರು…
ವರದಿ, ಆಶೀಪುಲ್ಲ ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030