ಕೂಡ್ಲಿಗಿ:”ಮತ ದಾನ ಮಾಡಿ” ಅದು ನಮ್ಮ ನಿಮ್ಮೆಲ್ಲರ ಹಕ್ಕು-ಪ ಪಂ ಮುಖ್ಯಾಧಿಕಾರಿ ಫಿರೋಜ್ ಖಾನ್- ವಿಜಯನಗರ ಜಿಲ್ಲೆ ಕೂಡ್ಲಿಗಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ, ಪಟ್ಟಣ ಪಂಚಾಯ್ತಿ ವತಿಯಿಂದ
ಬೀದಿ ನಾಟಕದ ಮೂಲಕ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳ ಲಾಗಿತ್ತು. ಅಭಿಯಾನದಲ್ಲಿ ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್ ಮಾತನಾಡಿ, ಮತದಾನ ಮಾಡಿ ಅದು ನಮ್ಮ ನಿಮ್ಮೆಲ್ಲರ ಹಕ್ಕು ಎಂದು ಮತದಾರರಿಗೆ ಮನವಿ ಮಾಡಿದರು.
ವಿಜಯ ನಗರ ಜಿಲ್ಲೆಯ ಜಿಲ್ಲಾಡಳಿತ, ಕೂಡ್ಲಿಗಿ ತಾಲೂಕು ಆಡಳಿತ ಹಾಗೂ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯ ನೇತೃತ್ವದಲ್ಲಿ. ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕೂಡ್ಲಿಗಿ ಪಟ್ಟಣದ 20 ವಾರ್ಡುಗಳಲ್ಲಿನ ಮತದಾರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ, ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. 2024ರ ಲೋಕಸಭಾ ಚುನಾವಣೆ ಕುರಿತು ಜನನಿ ಪುಷ್ಪಕಲಾ ಯುವಕರ ಸಂಘದಿಂದ, ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಮತದಾನದ ಮಹತ್ವ ಮತ್ತು ಮತದಾನದ ಜಾಗೃತಿ ಅಭಿಯಾನ ಜರುಗಿಸಲಾಯಿತು. ಕಲಾ ತಂಡದ ಅಧ್ಯಕ್ಷ ಚಮನ್ ಸಾಹೇಬ್ ಹಾಗೂ ತಂಡದವರು, ಹಾಡುಗಳ ಮೂಲಕ ಮತ್ತು ನಟನೆಗಳ ಮೂಲಕ ಮತದಾನ ಜಾಗೃತಿ ಮೂಡಿಸಿದರು. ಪಟ್ಟಣದ ಡಾ॥ ಬಿ. ಆರ್.ಅಂಬೇಡ್ಕರ್ ನಗರ ಹಾಗೂ ಮದಕರಿ ವೃತ್ತದಲ್ಲಿ ನಾಟಕದ ಮೂಲಕ ಮತದಾನ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್ ಮಾತನಾಡಿದರು, “ನಿಮ್ಮ ಮತ ನಿಮ್ಮ ಹಕ್ಕು” ಎಂಬುದನ್ನು ಎಲ್ಲರೂ ಮನಗಾಣ ಬೇಕಿದ್ದು, ಅದನ್ನು ಮತದಾರರೆಲ್ಲರೂ ಚಲಾಯಿಸಬೇಕು ಎಂದರು. ಮತದಾರರು ಖಡ್ಡಾಯವಾಗಿ ಮಾಡಿ, ಪಟ್ಟಣದ ಎಲ್ಲಾ ಬೂತ್ ಗಳಲ್ಲಿ ಶೇ ನೂರಕ್ಕೆ ನೂರರಷ್ಟು ಮತದಾನ ನಡೆಯಬೇಕಿದೆ. ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಾಗಿದೆ, ಮರದಾರರೆಲ್ಲರೂ ಭಾಗವಹಿಸಿದಾಗ ಮಾತ್ರ ಚುನಾವಣೆ ಹಬ್ಬ ಯಶಸ್ವಿಯಾಗಲು ಸಾಧ್ಯ ಎಂದರು….
ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030