ದಲಿತರು ತಿರುಗಿ ಬೀಳುವ ತನಕ
ಕೆಲವು ಗಾಂಡುಗಳ ಆರ್ಭಟ ಹೆಚ್ಚಿರುತ್ತದೆ
ಮೈಸೂರು : ಪಾನಿಪುರಿ ತಿನ್ನಲು ಮೇಲ್ವರ್ಗದವರ ಬೀದಿಗೆ ಬಂದರು ಎಂಬ ಕಾರಣಕ್ಕಾಗಿ ಜಯಪುರ ಹೋಬಳಿಯ ಅರಸಿನಕೆರೆಯಲ್ಲಿ ಪರಿಶಿಷ್ಟರ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದೆ.
ದಲಿತ ಯುವಕ ಪ್ರಸನ್ನ ಎಂಬವರು ಜ.13ರಂದು ಸವರ್ಣಿಯರ ಬೀದಿಗೆ ಹೋಗಿ ಪಾನಿಪುರಿ ತಿಂದಿದ್ದಾನೆನ್ನಲಾಗಿದೆ. ಈ ವೇಳೆ ತಿಂದ ಪ್ಲೇಟ್ ಅನ್ನು ಡಸ್ಟ್ ಬಿನ್ ಗೆ ಹಾಕಲಿಲ್ಲ ಎಂಬುದನ್ನೇ ನೆಪ ಮಾಡಿಕೊಂಡು ಸವರ್ಣೀಯ ವ್ಯಕ್ತಿಯೋರ್ವ ಪ್ರಶ್ನಿಸಿದ್ದು, ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು. ಮೇಲ್ವರ್ಗದವರ ಬೀದಿಗೆ ಬಂದು ಪಾನೀಪುರಿ ತಿಂದರೆಂದು ಗಲಾಟೆ ಮಾಡುತ್ತಾರೆ ಎಂದರೆ ನಾವು ಯಾವಕಾಲದಲ್ಲಿ ಇದ್ದೇವೆ. ಹಿಂದುಗಳೆಲ್ಲ ಒಂದು ಎನ್ನುವವರಿಗೆ ದಲಿತರು ಹಿಂದುಗಳೆಂದು ಕಾಣುವುದಿಲ್ಲವೆ. ದಲಿತರ ಮೇಲೆ ದೌರ್ಜನ್ಯ, ಅಸ್ಪೃಶ್ಯತೆ ಆಚರಣೆ ನಿಲ್ಲುವುದು ಯಾವಾಗ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ…
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030