ಕಾಡು ಹಂದಿ, ಕರಡಿ ಹಾವಳಿ ಜೋಳ ನಾಶ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿ ವಿವಿಧಡೆ ಕರಡಿ ಹಾಗೂ ಕಾಡು ಹಂದಿಗಳ ಹಾವಳಿ ಜಾಸ್ತಿಯಾಗಿ ಹತ್ತಾರು ಎಕರೆ ಪ್ರದೇಶದಲ್ಲಿನ ಜೋಳ, ಮತ್ತು ಮೆಕ್ಕೆಜೋಳ, ಬೆಳೆ ಹಾಳು ಮಾಡಿವೆ. ಹುಲಿಕುಂಟೆ ಗ್ರಾಮದಲ್ಲಿ 10 ಎಕರೆಗೂ ಜಾಸ್ತಿ ಹೈಬ್ರಿಡ್ ಜೋಳ, ಮತ್ತು ಮೆಕ್ಕೆಜೋಳ ಬೆಳೆ ನಾಶವಾಗಿದೆ ಎಂದು ಸಿದ್ದಪ್ಪ ತಂದೆ ಬರಮಪ್ಪ ತಿಳಿಸಿದ್ದಾರೆ.
ಸಂಜೆಯಾಗುತ್ತಿದ್ದಂತೆ ಕರಡಿ ಇಲ್ಲವೇ ಕಾಡು ಹಂದಿಗಳ ಹಿಂಡು ಹೊಲಗಳಿಗೆ ನುಗ್ಗಿ ಜೋಳದ ಬೆಳೆ ನೆಲಕ್ಕೆ ಹಾಕಿ ತೆನೆ ತಿಂದು ಹಾಕುತ್ತಿವೆ ಕೆಲ ಕಡೆ ರಾಶಿ ಮಾಡಬೇಕಾದ ಮೆಕ್ಕೆಜೋಳ ಸಂಪೂರ್ಣವಾಗಿ ಹಾಳು ಮಾಡಿವೆ.ಬೆದರಿಸಲು ಹೋದ ರೈತರ ಮೇಲೆ ದಾಳಿ ಮಾಡುತ್ತವೆ. ಈತ್ತೀಚಿಗೆ ಬಹಿರ್ದೇಶಗೆ ಹೋಗಿದ್ದ ಗುಂಡು ಮುಣುಗು ಗ್ರಾಮದ ರೈತನ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ. ಹೀಗಾಗಿ ಮಹಿಳೆ ಯಾರು ಒಬ್ಬರಾಗಿ ಹೊಲಕ್ಕೆ ಹೋಗಲು ಹೆದರುತ್ತೀದ್ದಾರೆ ಎಂದು ಹುಲಿಕುಂಟೆ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಹುಲಿಕುಂಟೆ ಗ್ರಾಮದಲ್ಲಿ 15 ಕ್ಕೂ ಹೆಚ್ಚು ರೈತರು ಕಾಡು ಹಂದಿ ಹಾಗೂ ಕರಡಿಗಳ ದಾಳಿಯಿಂದ ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದಾರೆ.
ಪರಿಹಾರಕ್ಕೆ ಆಗ್ರಹ
ಹುಲಿಕುಂಟೆ, ಭೀಮಸಮುದ್ರ,ಕರಡಿಹಳ್ಳಿ, ಸೇರಿದಂತೆ ಕೆಲ ಗ್ರಾಮಗಳಲ್ಲಿ ಕರಡಿ ಕಾಡು ಹಂದಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆಯವರು ಈ ಬಗ್ಗೆ ಕಾಳಜಿವಹಿಸಿ ರೈತರಿಗೆ ಕಾಡು ಹಂದಿ ದಾಳಿ ತಪ್ಪಿಸಬೇಕು, ಈಗಾಗಲೇ 5 ದಿನಗಳಿಂದ ನಿರಂತರವಾಗಿ ಕರಡಿ ದಾಳಿ ಮಾಡುತ್ತಲೇ ಇದೆ. ರೈತರು ಇಡೀ ರಾತ್ರಿ ನಿದ್ದೆ ಗಟ್ಟಿ ಕಾವಲು ಕಾಯುವ ಪರಿಸ್ಥಿತಿ ಬಂದಿದೆ ಈಗಾಗಲೇ ಹತ್ತಾರು ಎಕರೆ ಪ್ರದೇಶ ದಲ್ಲಿ ಬೆಳೆ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ಕೊಡಿಸುವಂತೆ ರೈತರು ಒತ್ತಾಯಿಸಿದ್ದಾರೆ.
ವರದಿ : ಸಿ ಓ ಅಜೇಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030