ಎಚ್ಚರಿಕೆ ವರದಿ ಪ್ರಭಾವ: ಎಚ್ಚೆತ್ತು ದುರಸ್ಥಿಗೊಳಿಸಿದ ಪಪಂ – ಎಚ್ಚರಿಕೆ ಗೆ ಹಾಗೂ ಪಪಂ ಗೆ ಅಭಿನಂದಿಸಿದ ನಾಗರೀಕರು ಸಾರ್ವಜನಿಕರು-ವಿಜಯನಗರ ಕೂಡ್ಲಿಗಿ: ಶ್ರೀಕೊತ್ತಲಾಂಜನೇಯ ದೇವಸ್ಥಾನ ಆವರಣದಲ್ಲಿದ್ದ, ಸ್ಟೀಟ್ ಲೈಟ್ ಕಂಬದ ಬುಡದಲ್ಲಿದ್ದ. “ಬಲಿಗಾಗಿ ಬಾಯ್ತೆರೆದು ಕುಂತ ಯಮಕಿಂಕರ”, ವಿದ್ಯುತ್ ಕಂಬದ ಬುಡಕ್ಕೆ ಹೊಂದಿಸಿಡಲಾಗಿದ್ದ ಪೆಟ್ಟಿಗೆ. ಸುಸ್ಥಿಯಿಂದ ಅಳವಡಿಸುವಂತೆ ಕ್ರಮಕ್ಕೆ ಒತ್ತಾಯಿಸಿ, ನಾಗರೀಕರು ಹಾಗೂ ಸಾರ್ವಜನಿಕರ ಕೋರಿಕೆ ಮೇರಿಗೆ “ಎಚ್ಚರಿಕೆ ತಂಡ” ವರದಿ ಮಾಡಿತ್ತು. ಪರಿಣಾಮ ಪಪಂ ಎಚ್ಚೆತ್ತುಕೊಂಡು ಯಮಕಿಂಕರ ರೂಪದಲ್ಲಿದ್ದ, ವಿದ್ಯುತ್ ಪರಿಕರಗಳ ಪೆಟ್ಟಿಗೆಯನ್ನು ಸುಸ್ಥಿಗಿರಿಸಿ ದುರಸ್ಥಿಗೊಳಿಸಿದೆ. ಈ ಜನಪರ ಕಾಳಜಿ ಹಾಗೂ ವರದಿಗೆ ಸ್ಪಂದಿಸಿದ್ದು, ನಾಗರೀಕರ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಎಚ್ಚರಿಕೆ ಯ ವರದಿಗೆ. ಮತ್ತು ಸಮಾಜ ಹಿತಕಾಯುವ ಸಮಾಜ ಸೇವಕರ ಒತ್ತಾಯಕ್ಕೆ ಮಣಿದು ಸಹಕರಿಸಿದ್ದಕ್ಕಾಗಿ, ದುರಸ್ಥಿಗೊಳಿಸಿದ ಪಪಂ ಅಧಿಕಾರಿ ಹಾಗೂ ಸಿಬ್ಬಂದಿಗೆ ಮತ್ತು ವರದಿ ಮಾಡಿದ್ದ ಎಚ್ಚರಿಕೆ ಪತ್ರಿಕಾ ಬಳಗದ ಸಂಪಾದಕ ಮಂಜುನಾಥ ಹಾಗೂ ಅವರ ತಂಡಕ್ಕೆ ಈ ಮೂಲಕ ಅಭಿನಂದಿಸಿದ್ದಾರೆ…
ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030