ಪೋಲೀಸರ ದಾಳಿ ಅಕ್ರಮ ಮರಳಿನ ಟ್ರ್ಯಾಕ್ಟರ ವಶ.
ಸಿಂಧನೂರ:ನ.11.ರಾಜದನವಿಲ್ಲದೆ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಟ್ರ್ಯಾಕ್ಟರ ಗಳನ್ನು ಪೋಲೀಸರು ದಾಳಿ ಮಾಡಿ ವಶಪಡಿಸಿ ಕೊಂಡು ಠಾಣೆಗೆ ತಂದಿದ್ದಾರೆ. ಆದರೆ ಟ್ರ್ಯಾಕ್ಟರ ಚಾಲಕರು ಹಾಗೂ ಮಾಲೀಕರು ಟ್ರ್ಯಾಕ್ಟರಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ತಾಲ್ಲೂಕಿನ ಅಲಬನೂರ ಹಳ್ಳದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುವ ಖಚಿತ ಮಾಹಿತಿಯ ಮೇರೆಗೆ ಗ್ರಾಮೀಣ ಠಾಣೆಯ ಪಿಎಸ್ಐ ಯರಿಯಪ್ಪ ಹಾಗೂ ಸಿಬ್ಬಂದಿಗಳಾದ ಶೇಟ್ಟೆಪ್ಪ ಇಂದು ಬೆಳಗಿನ ಜಾವ ದಾಳಿ ನಡೆಸಿದಾಗ ಪೊಲೀಸರನ್ನು ಕಂಡ ಚಾಲಕರು ಹಾಗೂ ಮಾಲೀಕರು ಹಳ್ಳದಲ್ಲಿ ಟ್ಯ್ರಾಕ್ಟರಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.
ಬೇರೆ ಟ್ಯ್ರಾಕ್ಟರ ಚಾಲಕರ ಸಹಾಯದಿಂದ ಪೋಲೀಸರು ಎರಡು ಟ್ರ್ಯಾಕ್ಟರಗಳನ್ನು ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಲೀಸರು ದಾಳಿ ನಡೆಸುವ ಮಾಹಿತಿ ತಿಳಿದ ಇನ್ನೂ ಕೆಲವು ಟ್ರ್ಯಾಕ್ಟರ ಹಾಗೂ ಟಿಪ್ಪರ ಚಾಲಕರು ಹಾಗೂ ಮಾಲೀಕರು ಪೋಲೀಸರಿಗೆ ಕೈಗೆ ಸಿಗದೆ ಕೈಕೊಟ್ಟ ವಾಹನಗಳ ಸಮೇತ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪೋಲೀಸರು ವಶಪಡಿಸಿಕೊಂಡ ಟ್ರ್ಯಾಕ್ಟರಗಳು ಮಂಜು ಚವ್ಹಾಣ ರೈತನಗರ ಕ್ಯಾಂಪ್ ಹಾಗೂ ಬಂಡೆಪ್ಪ ಅಲಿಯಾಸ್ ಮಲ್ಲಪ್ಪ ಎಂದು ತಿಳಿದು ಬಂದಿದೆ. ಗ್ರಾಮೀಣ ಪೊಲೀಸ ಠಾಣೆಯ ಪಿಎಸ್ಐ ಯರೆಯಪ್ಪ ಪ್ರಕರಣ ದಾಖಲಿಸಿಕೊಂಡು ಚಾಲಕರ ಹಾಗೂ ಮಾಲೀಕರ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಕ್ರಮ ಮರಳಿನ ಕಳ್ಳ ಮಂಜು ಚವ್ಹಾಣ ಬಿಜೆಪಿಯ ರಾಜ್ಯ ಸಾಮಾಜಿಕ ಜಾಲತಾಣ ದ ಅಮರೇಶ ರೈತನಗರ ಕ್ಯಾಂಪ್ ಇವರ ಸಂಬಂಧಿ ಯಾಗಿದ್ದಾನೆ. ಬಿಜೆಪಿಯ ಕಾರ್ಯಕರ್ತ ನೆಂದು ಹೇಳಿಕೊಂಡು ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾನೆ.
ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಟ್ರ್ಯಾಕ್ಟರನ್ನು ಬಳಗಾನೂರ ಪೋಲೀಸ ಠಾಣೆಯ ಪಿಎಸ್ಐ ವೀರುಪಾಕ್ಷಪ್ಪ ಶೆಟ್ಟಿ ಹಾಗೂ ಸಿಬ್ಬಂದಿಗಳ ಜೊತೆಗೆ ಹೋಗಿದಾಳಿ ಮಾಡಿ ಟ್ರ್ಯಾಕ್ಟರನ್ನು ವಶಪಡಿಸಿಕೊಂಡು ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಟ್ರ್ಯಾಕ್ಟರ ಚಾಲಕ ಸಿದ್ದಪ್ಪ ತಂದೆ ಶಿವಪ್ಪನ್ನು ಬಂಧಿಸಲಾಗಿದೆ ಟ್ರ್ಯಾಕ್ಟರ ಮಾಲೀಕ ಸಂಗಯ್ಯ ಸ್ವಾಮಿ ಹಾಲಾಪೂರ ಓಡಿ ಹೊಗಿದ್ದಾನೆ ಎಂದು ತಿಳಿದು ಬಂದಿದೆ..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030