ದಲಿತ ಮುಖಂಡರಿಂದ ಸನ್ಮಾನ ಸಮಾರಂಭ..

Listen to this article

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಲಿತ ಮುಖಂಡರಿಂದ ಸನ್ಮಾನ ಸಮಾರಂಭ*
*ದಿನಾಂಕ 14 .3 .2021 ಬಳ್ಳಾರಿ ಜಿಲ್ಲಾ ಸಂಡೂರು ತಾಲೂಕು*

ತಾಲೂಕಿನ ಸಂಡೂರು ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ( ಪ್ರೊ .ಬಿ. ಕೃಷ್ಣಪ್ಪ ಸ್ಥಾಪಿತ) ವತಿಯಿಂದ 2020 -21 ನೇ ಸಾಲಿನ ಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಶೀಲರಾದ ಹೊಲೆಯ ಮತ್ತು ಮಾದಿಗ ಸಮಾಜದ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ. ಅಧ್ಯಕ್ಷರಿಗೂ ಹಾಗೂ ಉಪಾಧ್ಯಕ್ಷ ರಿಗೂ ಸನ್ಮಾನ ಸಮಾರಂಭ ಆಚರಿಸಲಾಯಿತು.

 

ಜೊತೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಲ್ಲಿ 1990 ರಿಂದ ಪ್ರಸ್ತುತ ಕಾಲದಲ್ಲಿ ತಾಲೂಕು ಸಂಚಾಲಕರಾಗಿ ಸೇವೆಸಲ್ಲಿಸಿದ ಸಂಚಾಲಕರಿಗೆ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ದಲಿತ ನಾಯಕ ದಿವಂಗತ ಶಿವಣ್ಣ ಸಾಲು ಮನೆ.
ಇವರ ಕುಟುಂಬಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಡೂರು ತಾಲೂಕು ವತಿಯಿಂದ ಅವರ ಶ್ರೀಮತಿ ಯವರಿಗೆ 50 ಸಾವಿರ ರೂಪಾಯಿ ಚೆಕ್ ನೀಡಿ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ರಾಮಕೃಷ್ಣ ಹೆಗಡೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ರೋಷನ್ ಜಮೀರ್ ತಾಲೂಕು ಪಂಚಾಯಿತಿ ಕಾರ್ಯಾಲಯ ಲೆಕ್ಕ ಶೀರ್ಷಕರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಮಾ. ನೀ
ಪ್ರ. ಪ್ರಭು ಮಹಾಸ್ವಾಮಿ ಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀ ಶಿರಾಜ್ ಶೇಕ್ ವಹಿಸಿದ್ದರು. ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಾದ ವಿಘ್ನೇಶ್.s. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಡಿಎಸ್ಎಸ್ ರಾಜ್ಯ ಸಂಚಾಲಕರಾದ ನಿಂಗಪ್ಪ ಐಹೊಳೆ. ವೈ ದುರ್ಗಣ್ಣ ತಾಯಪ್ಪ. ಭುಜಂಗನಗರ ಹನುಮಂತಪ್ಪ. ಚಿರಂತ ಯ ಶಿಕ್ಷಕರು .ಪರಶುರಾಮ ಪಾಂಡುರಂಗಪ್ಪ. ಪ್ರತಾಪ್ ಎಸ್ಸಿ ಎಸ್ಟಿ ನೌಕರ ಸಂಘದ ಅಧ್ಯಕ್ಷರು. ಕುಮಾರ. ಕವಿತ
ರಾಜು, ಸುವರ್ಣ ಸಾಲು ಮನೆ . ದುರುಗೇಶ. ಸಾಲಿ ಗಂಗಪ್ಪ ದೇವೇಂದ್ರಪ್ಪ
ಹಾಗೂ ಮಹಿಳೆಯರು ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಸದಸ್ಯರು ಊರಿನ ಪ್ರಮುಖರು ಸಾರ್ವಜನಿಕರು ಉಪಸ್ಥಿತರಿದ್ದರು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend