ಆರ್ ಟಿ ಐ ಕಾರ್ಯಕರ್ತನ ಮೇಲೆ ಬಾಹುಬಲಿಯ ಪರಾಕ್ರಮ..
ನಿಡಗುಂದಿ ಗ್ರಾಮ ಪಂಚಾಯತಿಯ ಸದಸ್ಯರ ಮಗ, ಬಾಹುಬಲಿ ಕೆಮಲಪುರೇ ಎನ್ನುವ ಪುಡಿ ರೌಡಿಯಂತೆ ಒಬ್ಬ RTI ಕಾರ್ಯಕರ್ತರನ್ನು ಕೊಲೆ ಬೆದರಿಕೆ ಹಾಕಿದ್ದು ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ತುಂಬಾ ಚರ್ಚೆಗೆ ಕಾರಣವಾಗಿದ್ದು ಈ ಒಂದು ಸಮಾಜದಲ್ಲಿ ತಪ್ಪು ಮಾಡುವುದನ್ನು ಖಂಡಿಸುವುದು ಸರಿಯಲ್ಲ ಅಂದ ಮೇಲೆ, ಕಾನೂನು ಏಕೆ, ಸರ್ಕಾರ ಏಕೆ ಬೇಕು ಹೇಳಿ, ಕಾನೂನೇನು ಯಾರಪ್ಪನ ಆಸ್ತಿನ ಅಥವಾ ರಾಜ್ಯಸರ್ಕಾರದ ಆಡಳಿತ ಅವಧಿಯಲ್ಲಿ ಹಲವು ಕಡೆ, ಸುಮಾರು RTI ಕಾರ್ಯಕರ್ತರ ಮೇಲೆ ಹಲ್ಲೆ ಕೈ ಕಟ್ ಕಾಲು ಕಟ್ ಮಾಡಿದ್ದು ರುಂಡ ಕಟ್ ಮಾಡಿದ್ದು ಹಾಗೂ ಕೊಲೆ ಘಟನೆ ಇನ್ನೂ ಮರೆಮಾಚದೆ ಇರುವ ಸಮಯದಲ್ಲಿ ನಿಡಗುಂದಿ ಗ್ರಾಮ ಪಂಚಾಯಿತಿ ಹಗರಣವನ್ನು ಒಬ್ಬ ಸಾಮಾಜಿಕ ಕಾರ್ಯಕರ್ತ ಪ್ರಶ್ನೆ ಮಾಡುವ ಹಕ್ಕಿಲ್ಲವೇ ಮತ್ತು ಅಲ್ಲಿರುವ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಆಡಳಿತವನ್ನು ಮಾಡಿದ್ದರೆ ಇವರು ಹೋಗಿ ಪ್ರಶ್ನೆ ಮಾಡುವ ಸಮಯ ಏಕೆ ಬರುತ್ತಿತ್ತು? ಮತ್ತು ನಮ್ಮ ಒಂದು ಆಡಳಿತ ವ್ಯವಸ್ಥೆಯಲ್ಲಿ ಜೀವಬೆದರಿಕೆಯನ್ನು ಫೋನ್ ಕರೆ ಮುಖಾಂತರ ಮಾತನಾಡಿ ನಿನಗೆ ತಾಕತ್ತು ಇದ್ದರೆ ನಮ್ಮಊರಿಗೆ ಕೈ ಕಾಲು ಕಡಿದು ರಕ್ತ ಕುಡಿಯುತ್ತೇನೆ ಎನ್ನುವ, ಜೀವಬೆದರಿಕೆ ಹಾಕಿದ್ದರು ಸಹ, ಅಲ್ಲಿರುವ ಕಾನೂನು ಇಲಾಖೆ ಇಂತವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಿ ಇಂತವರನ್ನು ಜೈಲಿಗೆ ಕಳಿಸುವ ಕೆಲಸ ಏಕೆ ಮಾಡಲು ಹಿಂದೇಟು ಹಾಕುತ್ತೀದೆಯೋ ಆ ದೇವರಿಗೆ ಗೊತ್ತು, ಮತ್ತು ಇಂತಹ ಭ್ರಷ್ಟರ ಒಂದು ಉಪಟಳದಿಂದ ಇಂದು ರಾಜ್ಯದಲ್ಲಿ ಹಲವು RTI ಕಾರ್ಯಕರ್ತರ ಮತ್ತು ಹಲವು ಪ್ರಶ್ನೆ ಮಾಡುವವರ ಕುಟುಂಬ ಅಂತವರ ದೌರ್ಜನ್ಯದಿಂದ ಬೀದಿಗೆ ಬಿದ್ದಿವೆ. ಇದನ್ನೆಲ್ಲಾ ನೋಡುತ್ತಿದ್ದರೆ ಇಂತವರ ಒಂದು ಉಪಟಳಕ್ಕೆ ಹಿಂದೆ ಬಲವಾದ ಕೈಗಳು ಕೆಲಸವನ್ನು ಮಾಡುತ್ತಿರಬಹುದು ಎನ್ನುವ ಒಂದು ಅನುಮಾನ ಮಾತ್ರ ಸಾರ್ವಜನಿಕರಲ್ಲಿ ಬರದೆ ಇರಲ್ಲ
ಈ ಬೆದರಿಕೆ ಕರೆ ಕೊಲೆ ಅಥವಾ ದೌರ್ಜನ್ಯ ಹಲ್ಲೆ ಮೂಲಕ ಕೊನೆ ಆದ್ರೂ ಅಚ್ಚರಿ ಇಲ್ಲ ಕಾರಣ RTI ಕಾರ್ಯಕರ್ತ ಕೂಡ ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯುವಕ ಆಗಿದ್ದು ಬೆದರಿಕೆ ಹಾಕಿದ ಪುಡಿ ರೌಡಿ ಕೂಡ ಅದೇ ಗ್ರಾಮ ಪಂಚಾಯಿತಿ ಸದಸ್ಯನ ಮಗ ಗ್ರಾಮದಲ್ಲಿ ಪ್ರಭಾವಿ ವ್ಯಕ್ತಿ ಕೂಡ ಕೊಲೆ ಹಲ್ಲೆ ದಬ್ಬಾಳಿಕೆ ನಡೆಯುವ ಮುಂಚೆ ಬೆಳಗಾವಿ ಪೊಲೀಸ್ ಆಯುಕ್ತರು ಎಚೆತ್ತು ಹಾಡು ಕೊಲೆ ಬೆದರಿಕೆ ಹಾಕಿದವನ ವಿರುದ್ಧ ಯಾರ ಮೂಲಾಜಿಯು ಇಲ್ಲದೆ ರೌಡಿ ಶೀಟರ್ ಎಂದು ಪರಿಗಣಿಸಿ ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಹಿಸುವ ಅವಶ್ಯಕತೆ ಇದೆ ಬೆಳಗಾವಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈ ಗೊಳ್ಳುತ್ತ ಅಥವಾ ರಾಜಕೀಯ ಒತ್ತಡಕ್ಕೆ ಮಣಿದು ಇಂತ ಪುಡಿ ರೌಡಿಗಳನ್ನ ಹೀಗೆ ಮುಂದುವರಿಯಲು ಬಿಡ್ತಾರ ಕಾದು ನೋಡಬೇಕು.
ಮತ್ತು ಈ ಒಂದು ವಿಷಯ ಹಲವು ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾದರೂ ಇದರ ಬಗ್ಗೆ ಯಾವೊಬ್ಬ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೆ ಇರುವುದನ್ನು ನೋಡಿದರೆ ಹಲವಾರು ರೀತಿಯ ಅನುಮಾನಗಳು ಸಾರ್ವಜನಿಕರಿಗೆ ಮತ್ತು ಕೆಲ ಕಾರ್ಯಕರ್ತರಲ್ಲಿ ಮೂಡುತ್ತಿದೆ, ಏನಿದು ನಿಡಗುಂದಿ ಇದರ ಇಂದಿನ ಮರ್ಮವೇನು ಎಂಬುದು ಇಲ್ಲಿನವರಿಗೆ ಇದೇನು ಹೊಸವಿಷ್ಯ ಅಲ್ಲ ಬಿಡಿ ಅದೇನೇ ಇರಲಿ, ಇಲ್ಲಿ ಕಾಡುವ ಪ್ರಶ್ನೆ ಒಂದೇ “ಸಾಮಾಜಿಕ ಕಾರ್ಯಕರ್ತನ ಮೇಲೆ ಬಾಹುಬಲಿಯ ಪರಾಕ್ರಮ “ಇಂತಹ ಭ್ರಷ್ಟನಾ ಬಂಧನ ಯಾವಾಗ??? ಕಾಯ್ದು ನೋಡೋಣ…..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030