ಸಿಂಧನೂರು : ನಗರದ ಸಿಪಿಐ ಪೊಲೀಸ್ ಅಧಿಕಾರಿಗಳಿಗೆ ಸೂಕ್ತಕ್ರಮ ಜರುಗಿಸಲು ಮನವಿ…!!!

Listen to this article

ಸಿಂಧನೂರು : ನಗರದ ಸಿಪಿಐ ಪೊಲೀಸ್ ಅಧಿಕಾರಿಗಳಿಗೆ ಸೂಕ್ತಕ್ರಮ ಜರುಗಿಸಲು ಮನವಿ.

ವಾಲ್ಮೀಕಿ ಸಮುದಾಯದ ಬಗ್ಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಅರಿಬಿಟ್ಟಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಕುರಿತು ಕರ್ನಾಟಕ ವಾಲ್ಮೀಕಿ ನಾಯಕರ ಸಿಂಹಘರ್ಜನೆ ವೇದಿಕೆ ವತಿಯಿಂದ ತಾಲೂಕ್ ಪ್ರಬಾರಿ ಸಿಪಿಐ ಲಕ್ಷೀಕಾಂತ ಇವರಿಗೆ ಮನವಿ ಪತ್ರ ಸಲ್ಲಿಸಿದರು. ಗ್ರಾಮೀಣ ಪೋಲಿಸ್ ಠಾಣೆ ಪಿ. ಎಸ್. ಐ. ಯರಿಯಪ್ಪ ಜೊತೆಯಲ್ಲಿದ್ದರು.

ನಂತರ ಮಾತನಾಡಿದ ಮಾರುತಿ ನಾಯಕ್ ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ರುದ್ರಪ್ಪ ತಂದೆ ದುರ್ಗಪ್ಪ ಮಧ್ಯ ಕ್ಯಾಂಪ್ ಈತನು ವಾಲ್ಮೀಕಿ ಸಮಾಜದ ಬಗ್ಗೆ ಹಾಗೂ ವ್ಯಕ್ತಿಗತವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನಸ್ಸಿಗೆ ಬಂದಂತೆ ಮಾತನಾಡಿದ್ದಾನೆ. ಅದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಆದ್ದರಿಂದ ವಾಲ್ಮೀಕಿ ಸಮುದಾಯದ ಮನಸ್ಸುಗಳಿಗೆ ನೋವುಂಟಾಗಿದೆ. ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಒದಗಿಸಿ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ವಿಧಿಸಬೇಕು ಎಂದರು .

ಈ ಸಂದರ್ಭದಲ್ಲಿ ಪರಶುರಾಮ್ ತೆಕ್ಕಲಕೋಟೆ, ಸಂಗಮೇಶ್ ಗುಂಜಳ್ಳಿ ತಾಲೂಕ ಅಧ್ಯಕ್ಷರು ವಾಲ್ಮೀಕಿ ಸೇನೆ, ಅಂಬರೀಶ್ ನಾಯಕ್ ತುರುವಿಹಾಳ, ನಾಗರಾಜ್ ಹತ್ತಿಗುಡ್ಡ, ಅಂಬು ಹತ್ತಿಗುಡ್ಡ, ಮಾಂತೇಶ್ ದೇವರಗುಡಿ ಉಪಾಧ್ಯಕ್ಷರು ವಾಲ್ಮೀಕಿ ಸೇನೆ, ಮಲ್ಲೇಶ್ ಬೂದಿಹಾಳ, ಮಲ್ಲು ದಿದ್ದಿಗಿ,ಮಾರುತೇಶ್ ನಾಯಕ್ ತಾಲೂಕ ಅಧ್ಯಕ್ಷರು, ಹನುಮೇಶ ನಾಯಕ್ ಜಿಲ್ಲಾ ಉಪಾಧ್ಯಕ್ಷರು, ಬಸುರಾಜ ರಾಗಲಪರ್ವಿ, ವೆಂಕೋಬ್ ಬೂದಿಹಾಳ, ಸಿದ್ದು ನಾಯಕ್ ಗೊರೆಬಾಳ ,ವೆಂಕೋಬ ನಾಯಕ ಭೂತಲದಿನ್ನಿ, ಹನುಮೇಶ್ ಬಾಗವಾಡಿ ತುರುವಿಹಾಳ, ತಿಮ್ಮಣ್ಣ ಕಲ್ಮಂಗಿ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend