ಚಿತ್ರದುರ್ಗ: ಮೊಳಕಾಲ್ಮೂರು (ಜೂ-3) ತಾಲೂಕಿನ ರಾಯಪುರ ಹತ್ತಿರ ವಾಸವಾಗಿರುವ ಅಲೆಮಾರಿ ಕುಟುಂಬಗಳಿಗೆ ದಿನಸಿ ಪದಾರ್ಥಗಳ ‘ಆಹಾರ ಕಿಟ್’ ವಿತರಿಸಲಾಯಿತು. ಸಚಿವ ಬಿ ಶ್ರೀರಾಮುಲು ಅವರು ತಮ್ಮ ಸೇವೆಯನ್ನು ಮಾಡಿ ಮಾತನಾಡಿದರು ಒಬ್ಬ ರಾಜಕಾರಣಿಯಾಗಿ ಜನರ ಮುಖದಲ್ಲಿ ನಗು ನೋಡುವುದೇ ನನಗೆ ಸಾರ್ಥಕ. ಊರಿಂದ ಊರಿಗೆ ಹೋಗಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗುತ್ತಿದ್ದ ಅಲೆಮಾರಿ ಸಮುದಾಯ ಕುಟುಂಬ ಗಳಿಗೆ ಇಂತಹ ವ್ಯಾಮೋಹ ವ್ಯಾಘ್ರ ಕೋರೋನ ಲಾಕ್ ಡೌನ್ ಸಮಯದಲ್ಲಿ ವ್ಯಾಪಾರ ಇಲ್ಲದೆ ಬದುಕು ಸಾಗಿಸುವುದು ತುಂಬಾ ಕಷ್ಟಕರವಾಗಿದೆ. 60 ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು ಇಂಥ ಕಷ್ಟದ ಸಮಯದಲ್ಲಿ ಸಚಿವ ಬಿ ಶ್ರೀರಾಮುಲು ಅವರು ಇಂದು ಆಹಾರ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಟಿ ಸುರೇಶ್ ಕುಮಾರ್, ಸಿ.ಪಿ.ಐ ಜೆ.ಬಿ ಉಮೇಶ್ ನಾಯಕ್, ಪಿ.ಎಸ್.ಐ ಬಸವರಾಜ, ಗ್ರಾ.ಪಂ ಅಧ್ಯಕ್ಷರಾದ ಮಲ್ಲಿಕಾರ್ಜುನ್, ಪ.ಪಂ ಪಿ ಲಕ್ಷ್ಮಣ್, ತಾ.ಪಂ ಇಓ ಜಾನಕಿರಾಮ್, ಆಪ್ತಕಾರ್ಯದರ್ಶಿ ಪಾಪೇಶ್, ಪಿಡಿಒ ನೂರುಲ್ಲಾ, ಮಾಜಿ ಗ್ರಾ.ಪಂ ಅಧ್ಯಕ್ಷರಾದ ಅಜಯ್, ಬಿಜೆಪಿ ಮುಖಂಡರು ಉಪಸ್ಥಿತರು.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030