ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ.
ಮಹಾಲಿಂಗಪುರ: ಪಟ್ಟಣ ಸಮೀಪದ ಚಿಮ್ಮಡ ಗ್ರಾಮದಲ್ಲಿ ರಬಕವಿ ಜಾಂಬೋಟಿ ರಾಜ್ಯ ಹೆದ್ದಾರಿ ನಡುವೆ ನಿರ್ಮಾಣ ಹಂತದಲ್ಲಿರುವ ರಸ್ತೆ ವಿಭಜಕಕ್ಕೆ ಲಾರಿ ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಘಟನೆ ಗುರುವಾರ ಮಧ್ಯೆ ರಾತ್ರಿ ಒಂದು ಘಂಟೆ ಸುಮಾರಿಗೆ ನಡೆದಿದೆ. ಕೊಲ್ಹಾಪುರ ಸಮೀಪ ಆಲಂದಿಂದ ತೆಲಂಗಾನದ ಹೈದರಾಬಾದ್ ನಗರಕ್ಕೆ ಸುಮಾರು ಇಪ್ಪತೈದು ಟನ್ ತೂಕದ ಸಕ್ಕರೆ ಸಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಯಾವುದೆ ಅಹಿತಕರ ಘಟನೆ ನಡೆಯದೆ ಚಾಲಕ ಪ್ರಾಣಾಪಾಯದಿಂದ ಪಾರಗಿದ್ದು ಬೆಳಿಗ್ಗೆವರೆಗೂ ರಸ್ತೆಯ ಒಂದು ಬದಿ ಸಂಚಾರ ಸ್ಥಗಿತಗೊಂಡು ಮುಂಜಾನೆ ಮತ್ತೊಂದು ಲಾರಿಗೆ ಸಕ್ಕರೆ ತುಂಬಿ ಮಾರ್ಗ ಮಧ್ಯೆದ ಲಾರಿ ತೆದವುಗೊಳಸಿ ಸಂಚಾರಕ್ಕೆ ಅನುವು ಮಾಡಲಾಯಿತು.
ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030