ಬಳ್ಳಾರಿ.ಗಣಿನಗರದಲ್ಲಿಸಾರಿಗೆ ಸಂಚಾರ ಅಸ್ತವ್ಯಸ್ತ.
ಬಳ್ಳಾರಿ ನಗರದಲ್ಲಿ ಸಾರಿಗೆ ಸಂಚಾರ ಅಸ್ತವ್ಯಸ್ತ
ವಾಗಿದ್ದು.ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ನಗರದ ಸಾರಿಗೆ ನಿಲ್ದಾಣದಲ್ಲಿ ಬಸ್ಸು ಗಳ
ಸಂಚಾರವಿಲ್ಲದೆ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ,ಬಿ
ಕೋ ಎನ್ನುತ್ತಿದೆ.
ಸಾರಿಗೆ ಬಸ್ಸು ಸಂಚಾರ ಇಲ್ಲದೆ,ಖಾಸಗಿ ಬಸ್ ಗಳು ನಿ
ಲ್ದಾಣದ ಒಳಗೆ ಪ್ರವೇಶಿಸಿ ಪ್ರಯಾಣಿಕರ ಸೇವೆಗೆ
ಸಿದ್ಧವಾಗಿವೆ.ಪ್ರಯಾಣಿಕರು ಯಾವುದೋ ಪ್ರಯಾಣಕ್ಕೆ ವಾಹನ ಸಿಕ್ಕರೆ ಸಾಕು ಅಂತ ಕಾದು
ವಾಹನ ಹತ್ತುತ್ತಿದ್ದರೆ.ಇನ್ನು ಕೆಲ
ಪ್ರಯಾಣಿಕರು ತಮ್ಮ ತಮ್ಮ ಸ್ವಂತ ಊರುಗಳಿಗೆ
ಆಟೋರಿಕ್ಷಾ,ಟಂ,ಟಮ್ಗಳ ಮೊರೆ ಹೋಗುತ್ತಿದ್ದಾರೆ.ಆಟೋರಿಕ್ಷಾ ಸಾರ್ವಜನಿಕರ ಸಂಚಾರಕ್ಕೆ ಬೇಡಿಕೆ ಹೆಚ್ಚಾಗಿದೆ. ಹಾಗೂ ಅದರಲ್ಲಿಯು ಸಹ ಪ್ರಯಾಣಿಸುತ್ತಿದ್ದ ದೃಶ್ಯ ವನ್ನು ನೋಡಬಹುದು.
ಬಳ್ಳಾರಿಯ ಬಿಸಿಲಿನ ತಾಪಕ್ಕೆ ತತ್ತರಿತರಾಗಿ ಪ್ರಯಣಿಕರು,ಬಿಸಿಲಿನಿಂದ ನೆರಳಿಗೆ ಹೋಗಲು ,ಪರಿತಪಿಸುತ್ತಿದ್ದಾರೆ.ಇನ್ನೊಂದು
ಕಡೆ ಎರಡನೇ ಅಲೆ ಕರೊನ ಅಟ್ಟಹಾಸಕ್ಕೆ ಬೆದರಿದ ಪ್ರಯಾಣಿಕರು ಕಂಗಾಲಾಗಿ ಪ್ರಯಾಣ ನಡೆಸುತ್ತಿದ್ದಾರೆ.
ವರದಿ. ಎಂ.ಎಲ್.ವೆಂಕಟೇಶ್.ಬಳ್ಳಾರಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030