ರಸ್ತೆ ಮಧ್ಯೆ ಕೆಟ್ಟು ನಿಂತ ಬಸ್, ತಳ್ಳಿದ ಪ್ರಯಾಣಿಕರು.
ಸಿಂಧನೂರು : ಅಗಸ್ಟ್ 6.ಇಂದು ನಗರದ ಗಾಂಧಿ ವೃತ್ತದ ಬಳಿ ರಸ್ತೆಯಲ್ಲಿ ಬಸ್ ಕೆಟ್ಟು ನಿಂತಿದ್ದು, ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಎದುರಾಯ್ತು. ಸಿಂಧನೂರು ನಿಂದ ವಳಬಳ್ಳಾರಿಗೆ ಹೊರಟಿದ್ದ ಕೆಎ 36.ಎಪ್ 945 ನಂಬರಿನ ಬಸ್ ರಸ್ತೆ ಮಧ್ಯೆ ತನ್ನಷ್ಟಕ್ಕೆ ತಾನೇ ಸ್ಟಾಪ್ ಆಗಿದ್ದು ಮುಂದಕ್ಕೆ ಹೋಗಲೇ ಇಲ್ಲ. ಬಸ್ ಕಂಡಕ್ಟರ್ ಜೊತೆ ಪ್ರಯಾಣಿಕರೇ ಕೆಳಗೆ ಇಳಿದು ತಳ್ಳಲು ಕೈ ಜೋಡಿಸಿದರು.
ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ಸಾವಿರಾರು ಮಂದಿ ಕೆ.ಎಸ್.ಆರ್.ಟಿ.ಸಿ ನಂಬಿ ಬೀದಿ ಗಿಳಿಯುತ್ತಾರೆ. ಆದ್ರೆ ಕೆಎಸ್ಆರ್ಟಿಸಿ ಬಸ್ ಗಳು ಮಾತ್ರ ಎಲ್ಲೆಂದರಲ್ಲಿ ಕೈ ಕೊಡ್ತಿವೆ. ಇದಕ್ಕೆ ತಾಜಾ ಉದಾಹರಣೆ ದಾರಿ ಮಧ್ಯದಲ್ಲಿ ಕೆಟ್ಟು ನಿಂತ ಬಸ್ ಚಾಲಕರು ಸರಿಯಾಗಿ ನಿರ್ವಹಣೆ ಮಾಡದೆ ಬಸ್ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ತಿವೆ ಎಂದು ಪ್ರಯಾಣಿಕರು ಮಾತನಾಡಿಕೊಂಡರು…
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030