ಹೊಸಪೇಟೆ:ಮರೆಯಾಗಿರುವ ಆರ್.ಟಿ.ಓ ಕಚೇರಿ,ನಾಮಫಲಕ ಹಾಕಲು ಒತ್ತಾಯ…!!!

Listen to this article

ವರದಿ. ಮಂಜುನಾಥ್ ದೊಡ್ಡಮನಿ

ಹೊಸಪೇಟೆ:ಮರೆಯಾಗಿರುವ ಆರ್.ಟಿ.ಓ ಕಚೇರಿ,ನಾಮಫಲಕ ಹಾಕಲು ಒತ್ತಾಯ*ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿರುವ ಆರ್.ಟಿ.ಓ ಕಚೇರಿ ಮರೆಮಾಚಿದ್ದು,ಕಚೇರಿಯ ಆವರಣದಲ್ಲಿರುವ ನಾಮಫಲಕ ಸಾರ್ವಜನಿಕರಿಗೆ ಕಾಣದಾಗಿದೆ.ಕಾರಣ ಪ್ರಮುಖ ರಸ್ಥೆಬದಿಯಲ್ಲೊಂದು ಕಚೇರಿ ನಾಮಫಲಕ ನಿರ್ಮಿಸಬೇಕೆಂದು, ವಂದೇ ಮಾತರಂ ಜಾಗೃತಿ ವೇದಿಕೆ ಈ ಮೂಲಕ ಜಿಲ್ಲಾ ಆರ್.ಟಿ.ಓ ಅಧಕಾರಿಗಳಿಗೆ ಈ ಮೂಲಕ ಒತ್ತಾಯಿಸುತ್ತಿದೆ ಎಂದು ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ತಿಳಿಸಿದ್ದಾರೆ.ಜಿಲ್ಲಾ ಕೇಂದ್ರದಲ್ಲಿರುವ ‍ಆರ್.ಟಿ.ಓ ಕಚೇರಿಯು ಸಾರ್ವಜನಿಕರಿಗೆ,ಕೇಚರಿ ರಸ್ಥೆಯಿಂದ ಅನತಿ ದೂರದಲ್ಲಿದ್ದು ಈ ಕಚೇರಿಯಲ್ಲಿಯ ನಾಮಫಲಕವನ್ನ ಮರ ಗಿಡ ಗಂಟೆಗಳಿಂದ ಮುಚ್ಚಿ ಹೋಗಿದೆ.ಪ್ರಮುಖ ರಸ್ತೆಯಲ್ಲಿರುವ ವರಿಗೆ ಕಾಣಿಸದೇ ಮರೆಮಾಚಿದಂತಿದ್ದು, ಆರ್.ಟಿ.ಓ ಕಚೇರಿ ಕೇವಲ ಮದ್ಯವರ್ತಿಗಳ ಸೇವೆಗೆ ಮಾತ್ರವಲ್ಲ ಮೀಸಲಲ್ಲ ಸಾರ್ವಜನಿಕರಿಗೂ ಅಗತ್ಯವಿದೆ.ಸಾಮಾನ್ಯ ಜನರಿಗೆ ಕಚೇರಿ ಸಂಪರ್ಕಕ್ಕೆ ಲಭ್ಯವಾಗಬೇಕಿದೆ,ಹೊಸದಾಗಿ ಬಂದವರು ಕಚೇರಿಯನ್ನ ಹುಡುಕಾಡಬೇಕಿದೆ ಕಾರಣ ಜಿಲ್ಲಾ ಆರ್.ಟಿ.ಓ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು.ಕಾರಣ ಶೀಘ್ರವೇ ಪ್ರಮುಖ ರಸ್ತೆಗೊಂದು ಕಚೇರಿ ಇರುವಿಕೆಯ ನಾಮಫಲಕ ನಿರ್ಮಿಸಬೇಕೆಂದು ವಂದೇ ಮಾತರಂ ಜಾಗೃತಿ ವೇದಿಕೆ ಈ ಮೂಲಕ ಒತ್ತಾಯಿಸಿದೆ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend