ಮದುವೆಯ ವಾರ್ಷಿಕೋತ್ಸವ – ಸಂತೋಷದ ಕ್ಷಣಗಳು
ಸಮಯವೆಂಬುದೇ ಅಂತಹದು. ಸರಿದು ಹೋದ ದಿನಗಳು, ಉರುಳಿ ಹೋದ ವರ್ಷಗಳು ಗಮನಕ್ಕೆ ಬಾರದೆ 27 ವಸಂತಗಳು ಕಳೆದು ಹೋಗಿವೆ.
ನಮ್ಮ 28ನೇ ವಿವಾಹ ವಾರ್ಷಿಕೋತ್ಸವದ ಈ ಸುಸಂದರ್ಭದ ದಿನದಂದು ಸರಿದು ಹೋದ ದಿನಗಳನ್ನು ಮೆಲುಕು ಹಾಕುತ್ತಿದ್ದೇನೆ.
ನನ್ನ ಜೀವನದಲ್ಲಿ ಮಡದಿಯಾಗಿ ಬಂದ ಶ್ರೀಮತಿ ಲಕ್ಷ್ಮೀ ಅರುಣಾ ನನ್ನ ಏಳು -ಬೀಳುಗಳ, ಕಷ್ಟ- ನಷ್ಟಗಳ, ಸುಖ- ದುಃಖಗಳಲ್ಲಿ ಭಾಗಿಯಾಗಿ, ನನ್ನೊಂದಿಗೆ ಸಹಕರಿಸಿ ಕುಟುಂಬವನ್ನು ಕಾಪಾಡುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ.
ಪತಿಯಾಗಿ, ತಂದೆಯಾಗಿ, ಅಳಿಯನಿಗೆ ಮಾವನಾಗಿ, ಮುಂಬರುವ ಪೀಳಿಗೆಗೆ ತಾತನಾಗಿ ಜೀವನದ ಹಲವು ಮಜಲುಗಳ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ನನ್ನೊಂದಿಗೆ ಸಹಕರಿಸಿದ ನನ್ನ ಪ್ರೀತಿಯ ಮಡದಿ ಶ್ರೀಮತಿ ಲಕ್ಷ್ಮೀ ಅರುಣಾರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ .
ನನ್ನ ಜೀವನದ ಅತ್ಯಂತ ಕಷ್ಟಕರ ಸಮಯದಲ್ಲೂ ಕೂಡ ಸಂಯಮದಿಂದ ಕುಟುಂಬವನ್ನು ಸಂಭಾಳಿಸುವುದರ ಜೊತೆಗೆ ಒಬ್ಬ ತಾಯಿಯಂತೆ ಕಛೇರಿ ಸಿಬ್ಬಂದಿಯನ್ನು ಸೇರಿದಂತೆ ವೃದ್ಧಾಶ್ರಮ, ಗೋಶಾಲೆ ಹಾಗೂ ವಿಕಲಚೇತನ – ಬುದ್ಧಿಮಾಂದ್ಯ ಮಕ್ಕಳ ಶಾಲೆ ಗಳನ್ನು ನನ್ನ ಅನುಪಸ್ಥಿತಿಯಲ್ಲಿಯೂ ಕೂಡ ಜವಾಬ್ದಾರಿಯಿಂದ ನಡೆಸಿ, ನನ್ನ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಶ್ರಮ ವಹಿಸಿದ್ದಾರೆ.
ಆರತಿಗೊಬ್ಬ ಮಗಳಂತೆ ಬ್ರಹ್ಮಣಿ, ಕೀರ್ತಿಗೊಬ್ಬ ಮಗನಂತೆ ಕಿರೀಟಿಯನ್ನು ನೀಡಿ ಹಾಗೂ ಅವರಿಗೆ ಜೀವನದ ಮಾರ್ಗದರ್ಶನ ನೀಡಿ ಕುಟುಂಬಕ್ಕೂ ಹಾಗೂ ಸಮಾಜಕ್ಕೂ ಉತ್ತಮರನ್ನಾಗಿಸುವ ಅವರ ಶ್ರಮ ಪ್ರಶಂಸನೀಯವಾಗಿದೆ.
ಅಂತಹ ಮಡದಿಯನ್ನು ಪಡೆದ ನಾನೇ ಪುಣ್ಯವಂತ ನೆಂದು ಭಾವಿಸಿದ್ದೇನೆ.
ಈ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮೆಲ್ಲರ ಜೊತೆ ಈ ಸಂತೋಷವನ್ನು ಹಂಚಿಕೊಳ್ಳುತ್ತಿದ್ದೇನೆ.
ತಮ್ಮೆಲ್ಲರ ಹಾರೈಕೆ ನಮ್ಮ ಕುಟುಂಬದ ಮೇಲಿರಲಿಶುಭಾಶಯಗಳೊಂದಿಗೆ ಗಾಲಿ ಜನಾರ್ದನ ರೆಡ್ಡಿ…
ವರದಿ, ಎಚ್ಚರಿಕೆ ಕನ್ನಡ ನ್ಯೂಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030