ಕೋವಿಡ್ 3ನೇ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ.
ಕೂಡ್ಲಿಗಿ: ಕೋವಿಡ್ ರೋಗದಿಂದ ಮುಕ್ತವಾಗಬೇಕಾದರೆ ಪ್ರತಿಯೊಬ್ಬರೂ ಮೂರನೇ ಡೋಸ್ ಪಡೆಯಬೇಕು ಎಂದು ಟಿಎಚ್ಒ ಎಸ್.ಪಿ.ಪ್ರದೀಪ್ ಕುಮಾರ್ ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಶನಿವಾರ ಹಮ್ಮಿಕೊಂಡ ಕೋವಿಡ್ ಮೂರನೆ ಲಸಿಕಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತಾನಾಡಿದರು. ಕಳೆದ ಎರಡು ಅಲೆಗಳಲ್ಲಿ ಅನೇಕರು ಜೀವ ಬಿಟ್ಟಿದ್ದು ನಮ್ಮ ಎದುರಿಗಿದೆ ಆದರೂ ಅನೇಕರು ಲಸಿಕೆ ಪಡೆಯಲು ಮುಂದು ಬರುತ್ತಿಲ್ಲ.ಲಸಿಕೆ ಪಡೆಯದೇ ಅನೇಕರ ಸಾವನ್ನಪ್ಪಿ ಕುಟುಂಬಗಳು ತೀವ್ರ ನೋವು ಪಟ್ಟಿವೆ.ಪರಿಸ್ಥಿತಿ ಕೈ ಮೀರುವ ಮೊದಲೆ ಜಾಗೃತರಾಗಿ ಎಲ್ಲರು ಲಸಿಕೆ ಪಡೆಯಬೇಕು ಇದರಿಂದಾಗಿ ನಿಮ್ಮ ಅಮೂಲ್ಯ ಜೀವನ ಉಳಿಯುವ ಜತೆಗೆ ನಿಮ್ಮ ನಂಬಿದ ಕುಟುಂಬಗಳು ನೆಮ್ಮದಿಯಿಂದ ಇರಲು ಸಾಧ್ಯ ಎಂದು ತಿಳಿಸಿದರು.ನಾನಾ ದೇಶಗಳಲ್ಲಿ ಲಸಿಕೆ ಇಲ್ಲದೆ ಸಾವಿನ ಪ್ರಮಾಣ ಹೆಚ್ಚಾಗಿದೆ ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಆರೋಗ್ಯದ ವಿಷಯದಲ್ಲಿ ವಿಶೇಷವಾಗಿ ಕಾಳಜಿವಹಿಸಿ ನಿಗದಿತ ಸಮಯದಲ್ಲಿ ಲಸಿಕೆ ನೀಡಿದೆ,ಇದರಿಂದಾಗಿ ಇಂದು ವಿಶ್ವದಲ್ಲಿಯೇ ಭಾರತ ದೇಶವು ಕೋವಿಡ್ ಅಲೆಯನ್ನ ಸಮರ್ಪಕವಾಗಿ ಹಿಮ್ಮೆಟ್ಟಿಸಲು ಸಾಧ್ಯವಾಯಿತು ಎಂದು ತಿಳಿಸಿದರು. ಪಪಂ ಸದಸ್ಯ ಕೆ.ಎಚ್.ಎಂ.ಸಚಿನ್ ಕುಮಾರ್, ಮುಖಂಡರಾದ ಬಿ.ಭೀಮೇಶ್,ಎಸ್.ದುರುಗೇಶ್,ಹಿರಿಯ ಅರೋಗ್ಯಧಿಕಾರಿ ಜಗದೀಶ್ ನಾಯ್ಕ್,ಐಸಿಟಿಸಿ ಆಪ್ತ ಸಮಾಲೋಚಕ ಕೆ.ಪ್ರಶಾಂತ ಕುಮಾರ,ಹಿರಿಯ ಮಹಿಳಾ ಆರೋಗ್ಯಧಿಕಾರಿ ಸುನೀತ,ಭವ್ಯ ಸೇರಿದಂತೆ ಅನೇಕರು ಇದ್ದರು…
ವರದಿ. ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030