ಹುಲಿಕುಂಟೆಯಲ್ಲಿ ಬೆಳ್ಳಂಬೆಳಗ್ಗೆ ಮಹಿಳೆಯೋರ್ವಳ ಮೇಲೆ ಕರಡಿ ದಾಳಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಸಮೀಪದ ಹುಲಿಕುಂಟೆ ಗ್ರಾಮದಲ್ಲಿ ಮಹಿಳೆಯೊಬ್ಬಳ ಮೇಲೆ ಕರಡಿ ದಾಳಿ ನಡೆಸಿದೆ..
ಗುಡೇಕೋಟೆ:ಜು.16 ತಾಲೂಕಿನ ಗುಡೇಕೋಟೆ ಸಮೀಪದ ಹುಲಿಕುಂಟೆ ಗ್ರಾಮದಲ್ಲಿ
ನಸುಕಿನ ಜಾವ ಮಹಿಳೆಯೋರ್ವಳು ಬಹಿರ್ದೆಸೆಗೆಂದು ಹೊರಗಡೆ ಬಂದಾಗ ಮಹಿಳೆ ಮೇಲೆ ಕರಡಿ ದಿಢೀರ್ ದಾಳಿ ನಡೆಸಿ ಗಾಯಗೊಳಿಸಿದೆ. ಓಬಮ್ಮ ಗಂಡ ಏಕಾಂತಪ್ಪ(40) ಗಾಯಗೊಂಡವರಾಗಿದ್ದಾರೆ.
ಕರಡಿಯು ಉಗುರಿನಿಂದ ಹಣೆಯ ಮೇಲೆ, ಕೈಗಳಿಗೆ ಪರಚಿದೆ.ತಕ್ಷಣ ಮಹಿಳೆ ಕೂಗಿ ಕೊಂಡಾಗ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು, ಕರಡಿಗಾಗಿ ತಡಕಾಡಿ 2 ಕರಡಿಗಳನ್ನು ಅರಣ್ಯಕ್ಕೆ ಓಡಿಸಿದ್ದಾರೆ ತೀವ್ರವಾಗಿ ಗಾಯಗೊಂಡಿದ್ದ ಓಬಮ್ಮಳನ್ನು ಚಿಕ್ಕಜೋಗಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆನಿಡಲಾಗಿದೆ.
ಅರಣ್ಯಾಧಿಕಾರಿಗಳ ಭೇಟಿ: ಹುಲಿಕುಂಟೆಯಲ್ಲಿ ಮಹಿಳೆಯೋರ್ವಳ ಮೇಲೆ ಕರಡಿ ದಾಳಿ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗುಡೇಕೋಟೆ ವಲಯ ಅರಣ್ಯಾಧಿಕಾರಿ ಉಪ ವಲಯ ಅರಣ್ಯಾಧಿಕಾರಿ ಅವರ ತಂಡ ಭೇಟಿ ನೀಡಿ ಚಿಕ್ಕಜೋಗಿಹಳ್ಳಿ ಆಸ್ಪತ್ರೆಗೆ ಭೇಟಿ ನೀಡಿ ಮಹಿಳಾ ರವರನ್ನು ವಿಚಾರಿಸಿ ಕರಡಿ ಬಂದೋಗಿರುವ ಜಾಗಪರಿಶೀಲಿಸಿದ್ದಾರೆ.
ಮಳೆಗಾಲವಾಗಿರುವುದರಿಂದ ಆಹಾರ ಎಲ್ಲಿಯೂ ದೊರಕದಿರುವುದರಿಂದ ಜನಪ್ರದೇಶಗಳತ್ತ ಬಂದಿದೆ.ಕರಡಿಯನ್ನು ಸೆರೆ ಹಿಡಿಯಲು ಈಗಾಗಲೇ ತಂಡ ರಚಿಸಲಾಗಿದೆ.ಕರಡಿ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಅರಣ್ಯಾಧಿಕಾರಿಗಳಿಗೆ ತಿಳಿಸಬೇಕು ಹಾಗೂ ಯಾರೊಬ್ಬರೂ ಭಯಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ಅರಣ್ಯಾ ಇಲಾಖೆ ಅಧಿಕಾರಿಗಳು ಇದ್ದಾರೆ ಎಂದು ಜನರಲ್ಲಿ ಧೈರ್ಯ ತುಂಬಿದರು.
ರೇಣುಕಮ್ಮ ಗುಡೇಕೋಟೆ ವಲಯ ಅರಣ್ಯ ಅಧಿಕಾರಿ….
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030