ಯಶಸ್ವಿಯಾದ ನೊಂದವರ ದಿನಾಚರಣೆ.
ಮಹಾಲಿಂಗಪುರ: ನಗರದ ಪೊಲೀಸ್ ಠಾಣೆಯಲ್ಲಿ ನೊಂದವರ ದಿನಾಚರಣೆಯನ್ನ ಆಚರಣೆ ಮಾಡಲಾಯಿತು. ದಿನಾಚರಣೆಯಲ್ಲಿ ಪಾಲ್ಗೊಂಡ ಜನರ ಕೆಲ ಸಮಸ್ಯೆಗಳನ್ನು ಆಲಿಸಿ ಜಮಖಂಡಿಯ ಉಪ ವಿಭಾಗದ ಡಿವೈಎಸ್ ಪಿ
ಪಾಂಡುರಂಗಯ್ಯ ಮಾತಾನಾಡಿ ಯಾವುದೇ ರೀತಿಯ ಸಮಸ್ಯೆಗಳು ಇದ್ದಲ್ಲಿ ತಾವು ಭಯಭೀತರಾಗದೆ ಪೊಲೀಸ್ ಠಾಣೆಗೆ ಬಂದು ದೂರನ್ನು ದಾಖಲು ಮಾಡಬಹುದು ಮತ್ತು ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ಜೋತೆ ಹಿಂಜಿರಿಕೆ ಇಲ್ಲದೆ ಸಂವಹನ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಯಾವುದೇ ರೀತಿಯ ತಾರತಮ್ಯ ಇದ್ದರೆ ಅದನ್ನು ಸಹ ಮೇಲಾಧಿಕಾರಿಗಳಿಗೆ ತಿಳಿಸಬಹುದೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಠಾಣಾಧಿಕಾರಿ ವಿಜಯ ಕಾಂಬಳೆ ಮಾತನಾಡಿ ಮಹಾಲಿಂಗಪುರ ಪಟ್ಪಣದ ಮಧ್ಯಭಾಗದಲ್ಲಿ ಎರಡು ರಾಜ್ಯ ಹೆದ್ದಾರಿಗಳು ಹಾದು ಹೋಗಿರುವದರಿಂದ ವಾಹನ ಸಂಚಾರ ಹೆಚ್ಚಿದ್ದು ಅಪಘಾತಗಳ ಜಾಸ್ತಿ ಸಡೆಯುವ ಸಂಭವ ಇರುತ್ತದೆ ಮುನ್ನೆಚ್ಚರ ವಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ
ಎಸ್.ಎಸ್.ಘಾಟಗೆ,
ವಾಯ್.ವಾಯ್.ಗಚನ್ನವರ,
ಜೆ.ಜೀ.ಪಾಟೀಲ,
ಆರ್.ಆರ್.ಕಾಂಬಳೆ,
ಬಾರಿಗಿಡದ, ಎಂ.ಎಸ್ ಕನಸೆಟ್ಟಿ,ಬಿ.ಪಿ.ಹಡಪದ, ರಮೇಶ ಬರಗಿ, ಈಶ್ವರ ಇಂಗಳಗಾಂವಿ,ಪಿ.ಜಿ.ದೇಸಾಯಿಮತ್ತು ಹಲವಾರು ಬಂದಂತ ನೊಂದ ಜನ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಉಪ್ಥಿತರಿದ್ದರು.
ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030