ಹರಪನಹಳ್ಳಿ ಯೋಗ ಸಮಿತಿ ವತಿಯಿಂದ ಟಿ ವಿ ಪ್ರಕಾಶ ಹರಪನಹಳ್ಳಿ ಉಪ ವಿಭಾಗಾಧಿಕಾರಿಗೆ ಸನ್ಮಾನ…..
ಹರಪನಹಳ್ಳಿ,17ರಂದು ಸರಳ, ಸಜ್ಜನ ಮಂದಸ್ಮಿತ ಅಧಿಕಾರಿ ಟಿ ವಿ ಪ್ರಕಾಶ ಹರಪನಹಳ್ಳಿ ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರುವುದು ತುಂಬಾ ಸಂತೋಷವಾಗಿದೆ ಎಂದು ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು.
ಅವರು ಯೋಗ ಸಮಿತಿ ವತಿಯಿಂದ ಸನ್ಮಾನಿಸಿ ಮಾತನಾಡಿ ಈ ಹಿಂದೆ ತಹಶಿಲ್ದಾರರಾಗಿ ಉಪವಿಭಾಗಾಧಿಕಾರಿಯಾಗಿ ಉತ್ತಮ ಆಡಳಿತ ನಡೆಸಿ ಮತ್ತೆ ಹರಪನಹಳ್ಳಿಗೆ ಬಂದಿರುವುದು ಉತ್ತಮ ಅಧಿಕಾರಿಯನ್ನು ಪಡೆದಂತಾಗಿದೆ.
ಇವರಿಂದ ಹರಪನಹಳ್ಳಿ, ಹಡಗಲಿ ಮತ್ತು ಕೊಟ್ಟೂರು ಆಡಳಿತ ಯಂತ್ರ ಚುರುಕು ಪಡೆಯಲಿದೆ ಎಂದರು.
ಸಮಾರಂಭದಲ್ಲಿ ಡಾಕ್ಟರ್ ವಿನಯ ಬೇಂದ್ರೆ, ಡಾಕ್ಟರ್ ಸಂತೋಷ,ಬಿ ಸುದರ್ಶನ್,
ಕೆ.ಅರವಿಂದ ಲಿಕ್ವಿಡ್ ಇಡಿಯಟ್ ನೃತ್ಯ ತಂಡದ ಎಲ್ಲಾ ಸಂಗಡಿಗರು ಚನ್ನವೀರ ಸ್ವಾಮಿ, ಹೆಚ್.ಮಂಜುನಾಥ, ಹನುಮಂತ, ಹೆಚ್.ಹೃತಿಕ್ ಮುಂತಾದವರು ಇದ್ದರು….
ವರದಿ. ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030