ಡಾ.ಶ್ರೀನಿವಾಸ್ ಮಾದರಿ ನಡೆ: ಹಾರ, ತುರಾಯಿ ಬೇಡವೆಂದು ಸರಳತೆ ಮೆರೆದ ಶಾಸಕ…!!!

Listen to this article

ಡಾ.ಶ್ರೀನಿವಾಸ್ ಮಾದರಿ ನಡೆ: ಹಾರ, ತುರಾಯಿ ಬೇಡವೆಂದು ಸರಳತೆ ಮೆರೆದ ಶಾಸಕ.

ಕೂಡ್ಲಿಗಿ: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ರವರು ಹಾರ ತುರಾಯಿ ನಿರಾಕರಿಸಿದ್ದಾರೆ. ಗೌರವ, ಸನ್ಮಾನ ರೂಪದಲ್ಲಿ ಹಾರ, ತುರಾಯಿ, ಶಾಲು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ಈ ಮೂಲಕ ಶಾಸಕರು ಸರಳತೆ ಮೆರೆದಿದ್ದು, ಅವರ ನಿರ್ಧಾರಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಕೈಗೊಂಡಿರುವ ನಿರ್ಧಾರವನ್ನು ಅಭಿನಂದಿಸುತ್ತ ನಾನು ಅವರನ್ನು ಅನುಸರಿಸಲು ಬಯಸಿದ್ದೇನೆ. ಕಾಣಿಕೆಗಳ ಮೂಲಕವೇ ಪ್ರೀತಿ ಮತ್ತು ಗೌರವಗಳನ್ನು ಸಲ್ಲಿಸಬೇಕೆಂದೇನಿಲ್ಲ, ಈ ಕ್ಷೇತ್ರದ ಹಾಗೂ ನಿಮ್ಮೆಲ್ಲರ ಪ್ರೀತಿ ಅಭಿಮಾನ ಒಂದೇ ಸದಾ ನನ್ನ ಮೇಲಿರಲಿ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರತಿಯೊಂದು ಹಳ್ಳಿಗಳಲ್ಲಿ ಅಭೂತಪೂರ್ವಕವಾಗಿ ಹೂವಿನ ಹಾರ, ತುರಾಯಿ, ಹೂವಿನ ಸುರಿಮಳೆಯನ್ನೇ ಸುರಿದು ಈ ನಿಮ್ಮ ಮನೆ ಮಗನನ್ನು ಅದ್ದೂರಿಯಾಗಿ ಸ್ವಾಗತಿಸಿದ್ದೀರಿ, ಇದನ್ನೆಲ್ಲ ಮನಗಂಡ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಿರ್ಧಾರದಂತೆ ನಾನು ಸಹ ಕ್ಷೇತ್ರದಲ್ಲಿ ಹಾರ, ತುರಾಯಿ, ಪುಷ್ಪಗುಚ್ಛಗಳು, ಮತ್ತು ಶ್ಯಾಲುಗಳನ್ನು, ಅತ್ಯಂತ ವಿನಯ ಪೂರ್ವಕವಾಗಿ ಸ್ವೀಕರಿಸದೇ ಇರಲು ನಿರ್ಧರಿಸಿದ್ದೇನೆ.ಈ ನಿಮ್ಮ ಪ್ರೀತಿಗೆ ನಾನು ಎಂದಿಗೂ ಚಿರಋಣಿಯಾಗಿರುವೆ ಎಂದು ಕ್ಷೇತ್ರದ ಮತದಾರರಲ್ಲಿ ಪತ್ರಿಕೆ ಮುಖಾಂತರ ಮನವಿ ಮಾಡಿಕೊಳ್ಳುತ್ತೇನೆ.

ಅದೇ ರೀತಿ ಹಾರ ತುರಾಯಿ ಬದಲಿಗೆ ಕೊಡುವುದಾದರೆ ಪುಸ್ತಕಗಳನ್ನು ನೀಡುವಂತೆ ಶಾಸಕ ಎನ್.ಟಿ.ಶ್ರೀನಿವಾಸ್ ಮನವಿ ಮಾಡಿದ್ದು, ಅವರ ನಿರ್ಧಾರಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend