ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ
ಕಾನಹೊಸಹಳ್ಳಿ ಸಮೀಪದ ಅರಣ್ಯದಂಚಿನಲ್ಲಿ ಯುವಕನ ಮೇಲೆ ಚಿರತೆ ದಾಳಿ.
ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದ ಸುದರ್ಶನ(29) ತಂದೆ- ಬಗಳರ ಹಟ್ಟಿ ಮಲ್ಲಯ್ಯ ಈತನು ದಿನನಿತ್ಯದಂತೆ ದನಗಳನ್ನು ಮೇಯಿಸಲು ಸಮೀಪದ ಅರಣ್ಯ ದ ಹತ್ತಿರ ದನಗಳನ್ನು ಹೊಡೆದುಕೊಂಡು ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಏಕಾಏಕಿಯಾಗಿ ಚಿರತೆಯೊಂದು ಈತನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಈ ದಿನ ಸೋಮವಾರ ಮಧ್ಯಾಹ್ನ ಅರಣ್ಯದ ಸಮೀಪ ಜರುಗಿದೆ. ಈತನು ಚಿರತೆ ದಾಳಿ ಮಾಡುವ ಸಮಯದಲ್ಲಿ ಗಟ್ಟಿಯಾಗಿ ಕಿರುಚಾಡಿದ ರಿಂದ ಪಕ್ಕದ ಜಮೀನಿನಲ್ಲಿ ಇರುವರು ಬಂದು ಈತನನ್ನು ರಕ್ಷಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಈ ರೀತಿ ಚಿರತೆ ದಾಳಿ ಮಾಡಿರುವುದರಿಂದ ಅರಣ್ಯದ ಸುತ್ತಮುತ್ತಲಿನ ಹಳ್ಳಿಗಳಾದ ಜುಮ್ಮೋಬನಹಳ್ಳಿ ಹೊಸಹಳ್ಳಿ ಸಿದ್ದಾಪುರ ಲೋಕಿಕೆರೆ ಪೂಜಾರಹಳ್ಳಿ ಬಳ್ಳಾಪುರದ ಜನರು ಭಯಭೀತರಾಗಿದ್ದಾರೆ. ಚಿರತೆ ದಾಳಿ ಮಾಡಿದ ಸುದರ್ಶನ ಕಾನಹೊಸಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030