ವಿಜಯನಗರ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್19 ಎರಡನೇ ಅಲೆಯಲ್ಲಿ ಮೃತಪಟ್ಟವರಿಗೆ ಜನಪ್ರಿಯ ಶಾಸಕರಾದ ಸನ್ಮಾನ್ಯ
“ಶ್ರೀ ಎನ್ ವೈ ಗೋಪಾಲಕೃಷ್ಣ” ಅವರು ಇತ್ತೀಚೆಗೆ 52 ಜನ ಮೃತಪಟ್ಟಿರುವವರಿಗೆ ತಮ್ಮ ವೈಯಕ್ತಿಕವಾಗಿ ₹20,000/- ಪರಿಹಾರವನ್ನು ನೀಡಿರುತ್ತಾರೆ, ಹಾಗೂ ಇತ್ತೀಚಿಗೆ ಮತ್ತೆ 4 ಜನ 1)ಚಿಕ್ಕೊಬನಹಳ್ಳಿ ತಾಯಮ್ಮ 2)ಈಶ್ವರಪ್ಪ ಶಿವಪುರ
3) ತಿಮ್ಮಕ್ಕ ರಾಮಸಾಗರ ಹಟ್ಟಿ 4)ಮಂಜುನಾಥ ಭೀಮಸಮುದ್ರ ಇವರುರುಗಳಿಗೆ ಮಾನ್ಯ ಶಾಸಕರ ಸೂಚನೆ ಮೇರೆಗೆ ಅವರ ಆಪ್ತ ಸಹಾಯಕ ಬಿ. ಶ್ರೀಕಾಂತ ಅವರು ಮೃತ ಕುಟುಂಬಗಳಿಗೆ ತಲಾ 20,000 ರೂಪಾಯಿಗಳನ್ನ ಶಾಸಕರ ವೈಯಕ್ತಿಕಹಣ ಒಟ್ಟು ₹80,000 ಸಾವಿರ ಹಣವನ್ನ ಬಿಜೆಪಿ ಮುಖಂಡರುಗಳ ಸಮಕ್ಷದಲ್ಲಿ ಶಾಸಕರ ಕಚೇರಿ ಆವರಣದಲ್ಲಿ ನೀಡಲಾಯಿತು
ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಕೆ.ಎಂ ತಿಪ್ಪೇಸ್ವಾಮಿ, ಟಿ ಜಿ ಮಲ್ಲಿಕಾರ್ಜುನ, ಜಿಲ್ಲಾ ಪಂಚಾಯತ್ ಸದಸ್ಯರಾದ ಹೆಚ್ ರೇವಣ್ಣ ,ಬಿಜೆಪಿಯ ಅಧ್ಯಕ್ಷರಾದ ಚೆನ್ನಪ್ಪ ,ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥನಾಯಕ ಯುವ ಮುಖಂಡರಾದ ವಿ.ಭೀಮೇಶ್, ಪಟ್ಟಣ ಪಂಚಾಯತಿ ಸದಸ್ಯರಾದ
ಶ್ರೀ ಚಂದ್ರಣ್ಣ,ಕೆ.ಎಚ್ ಎಂ.ಸಚಿನ್ ಉಪಸ್ಥಿತರಿದ್ದರು.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030