ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
*ಎಂಬಿ.ಐಯ್ಯನಹಳ್ಳಿ: ಲಾರಿ ಬೈಕ್ ಡಿಕ್ಕಿ ಓರ್ವ ಮೃತ,ಓರ್ವನ ಸ್ಥಿತಿ ಗಂಭೀರ ಲಾರಿ ಬೈಕ್ ಭಸ್ಮ*<>ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಎಂ.ಬಿ.ಅಯ್ಯನಹಳ್ಳಿ ಗ್ರಾಮದ ಹತ್ತಿರ, ರಾಹೆ50ರಲ್ಲಿ ಶನಿವಾರ ಸಂಜೆ ಅಡಿಕೆ ತುಂಬಿದ್ದ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು,ಲಾರಿಯ ಕೆಳಗೆ ಬೈಕ್ ಸಿಲುಕಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಬೈಕ್ ನಲ್ಲಿದ್ದವರು ತಾಲೂಕಿನ ಹಾರಕಬಾವಿ ಗ್ರಾಮದವರೆಂದು ತಿಳಿದುಬಂದಿದೆ,ಬೈಕ್ ಹಿಂಬದಿ ಸವಾರ ಸ್ಥಿತಿ ಗಂಭೀರವಾಗಿದೆ,ಬೈಕ್ ಲಾರಿಯಡಿ ಸಿಲುಕಿರುವುದರಿಂದಾಗಿ ಲಾರಿ ಬೈಕ್ ಗೆ ಬೆಂಕಿ ಹೊತ್ತಿಕೊಂಡಿದೆ.ಲಾರಿ ದುರ್ಗದಿಂದ ಹೊಸಪೇಟೆ ಕಡೆಗೆ ತೆರಳುತಿದ್ದು, ತಾಲೂಕಿನ ಹಾರಕ ಬಾವಿ ಗ್ರಾಮದ ಇಬ್ಬರು ಯುವಕರು ತಮ್ಮ ಗ್ರಾಮದೆಡೆಗೆ ತೆರಳುತಿದ್ದಾಗ ಡಿಕ್ಕಿ ಸಂಭವಿಸಿದೆ.ಬೈಕ್ ಲಾರಿ ಕೆಳಗೆ ಸಿಲುಕಿದ್ದು ಲಾರಿ ಬೆಂಕಿ ಹೊತ್ತಿಕೊಂಡಿದೆ, ಆಡಿಕೆ ತುಂಬಿರುವ ಸರ್ದಾರ್ ಜೀ ಲಾರಿ ಉರಿದು ಸಂಪೂರ್ಣ ಭಸ್ಮವಾಗಿದೆ.ಒಬ್ಬ ಯುವಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿವೆ, ಗಾಯಾಳುವನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030