ಸಿಂಧನೂರು:”ಕನ್ನಡಿಗರ ಜನರಪರ ವೇದಿಕೆ”ವತಿಯಿಂದ ನಗರದಲ್ಲಿ ಕರೋನ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಉದ್ದೇಶದಿಂದ ಔಷಧಿ ಸಿಂಪಡಿಸುವ ಕಾರ್ಯಕ್ರಮವನ್ನು ಬೆಳಗ್ಗೆ 10-30 ಗಂಟೆಗೆ ಮಾನ್ಯ ಜನಪ್ರಿಯ ಶಾಸಕರಾದ ವೆಂಕಟರಾವ್ ನಾಡಗೌಡ್ರು ಗಾಂಧಿ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ಉದ್ಘಾಟನೆ ಮಾಡಿದರು ನಂತರ ಕನ್ನಡಿಗರ ಜನಪರ ವೇದಿಕೆ ಕಚೇರಿಯಲ್ಲಿ ಮಾನ್ಯ ಜನಪ್ರಿಯ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು, ಹಾಗೂ ವಾಲ್ಮೀಕಿ ವೃತ್ತದಲ್ಲಿ ಮಾನ್ಯ ಮಾಜಿ ನಗರಸಭೆ ಸದಸ್ಯರಾದ ಹಾಗೂ ಜೆಡಿಎಸ್ ವಕ್ತರಾದ ಬಸವರಾಜ್ ನಾಡಗೌಡರು ಔಷಧಿ ಸಿಂಪರಣೆ ಮಾಡಿ ನಂತರ ನಗರದ ಕೊಳಚೆ ಪ್ರದೇಶದಲ್ಲಿ ಔಷಧಿ ಸಿಂಪರಣೆ ಮಾಡಿದರು.
ಸಿಂಧನೂರು ನಗರವನ್ನು ಕರೋನ ಮುಕ್ತ ನಗರವನ್ನಾಗಿ ಮಾಡಲು ನಮ್ಮ ಕನ್ನಡಿಗರ ಜನಪರ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಒಂದು ಚಿಕ್ಕದಾಗಿ ಪ್ರಯತ್ನ ನಡೆಸಿದ್ದು ಕಾರಣ ತಾವೂ ಎಲ್ಲಾರೂ ಕರೋನಾ ಮುಕ್ತ ನಗರವನ್ನು ಮಾಡಲು ನಮ್ಮ ಕೈ ಬಲಪಡಿಸಬೇಕು .ಈ ಸಂದರ್ಭದಲ್ಲಿ ರಾಜ್ಯಾ ಸಂಘಟನೆ ಕಾರ್ಯದರ್ಶಿಯಾದ ಸೈಯದ್ ರಬ್ಬನಿ ಜಾಗಿರ್ದಾರ್, ಜಿಲ್ಲಾಧ್ಯಕ್ಷರಾದ ಬಕ್ಷಿ ದವೇಶ್, ತಾಲೂಕು ಅಧ್ಯಕ್ಷರಾದ ಆದನಗೌಡ ಜವಳಗೆರಾ, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸ್ನೇಹಲತಾ ಟಾಕುರ್, ತಾಲೂಕು ಆಟೋ ಚಾಲಕರ ಅಧ್ಯಕ್ಷರಾದ ಉಸ್ಮಾನ್ ಪಾಶ, ನಗರ ಘಟಕದ ಅಧ್ಯಕ್ಷರಾದ ಬಸವರಾಜ್ ಹಳೆಮನೆ, ಗಾಂಧಿನಗರ ಗ್ರಾಮ ಘಟಕದ ಅಧ್ಯಕ್ಷರಾದ ಷರೀಫ್, ನಗರ ಘಟಕ ಉಪಾಧ್ಯಕ್ಷರಾದ ಹುಸೇನ್ ಬಾಷಾ, ತಾಲೂಕು ಕಾರ್ಯದರ್ಶಿಯಾದ ವೆಂಕಟೇಶ್, ಮುಖಂಡರಾದ ಎಸ್ಎಸ್ ಪಾಶ, ಅಸ್ಲಮ್ ಪಾಶ, ಬಿಜೆಪಿಯ ಅಲ್ಪಸಂಖ್ಯಾತರ ನಗರ ಘಟಕ ಅಧ್ಯಕ್ಷರಾದ ಶಿರಾಜ್ ಪಾಷಾ, ಹಾಗೂ ಬಿಜೆಪಿಯ ಗ್ರಾಮೀಣ ಹಿಂದುಳಿದ ವರ್ಗದ ಅಧ್ಯಕ್ಷರಾದ ಶರಣು ಗೊರೆಬಾಳ್, ರಫಿ, ಪೂಜಾರಿ, ಲಾಲೂ ಸಾಬ್, ಸಂಜು ಕುಮಾರ ಮತ್ತು ಇತರರು ಇದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030