ಚಿಲ್ಲರೆ ಇಲ್ಲ ಎಂದು ಬಸ್ ನಿಂದ ವೃದ್ಧೆ ಹೊರಕ್ಕ…!!!

Listen to this article

ಚಿಲ್ಲರೆ ಇಲ್ಲ ಎಂದು ಬಸ್ ನಿಂದ ವೃದ್ಧೆ ಹೊರಕ್ಕ

ಕೆ ಎಸ್ಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಬಸ್ ನಿರ್ವಾಕ
ಸುಮಾರು 80 ವರ್ಷದ ವಯೋವೃದ್ಧೆಯನ್ನು ನಡು
ಗ್ರಾಮದಲ್ಲಿಯೇ ಇಳಿಸಿ ಹೋದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ನಡೆದಿದೆ.
ರಾಣೇಬೆನ್ನೂರ ಡಿಪೋಗೆ ಸೇರಿದ ಕೆಎ-42, ಎಫ್-1258 ಎಂಬ ಬಸ್ ರಾಣೇಬೆನ್ನೂರಿನಿಂದ ಚೌಡಯ್ಯದಾನಪುರ ಮಾರ್ಗವಾಗಿ ಗುತ್ತಲಕ್ಕೆ ಸಂಚರಿಸುತ್ತದೆ. ಈ ಸಂದರ್ಭದಲ್ಲಿ ಗುತ್ತಲದಲ್ಲಿ 9:20ಕ್ಕೆ ಬಸ್
ರಾಣೇಬೆನ್ನೂರಿಗೆ ಬಿಡುವ ಸಂದರ್ಭದಲ್ಲಿ ಗುತ್ತಲದ ಅನ್ನಪೂರ್ಣಮ್ಮ ಗಡ್ಡಿಯವರ ಎಂಬ ವಯೋವೃದ್ಧೆಯು ರಾಣೇಬೆನ್ನೂರಿಗೆ ತೆರಳು ಬಸ್ ಹತ್ತಿದ್ದಾರೆ.ಬಸ್‌ನಲ್ಲಿ ನಿರ್ವಾಹಕ ಟಿಕೇಟ್ ಕೇಳಲು ಬಂದಾಗ ಅಜ್ಜಿಯು 500ರೂ ನೋಟನ್ನು ಕೊಟ್ಟು ರಾಣೇಬೆನ್ನೂರಿಗೆ ಟಿಕೇಟ್ ಕೊಡುವಂತೆ ಕೇಳಿದ್ದಾಳೆ. ಆದರೆ ನಿರ್ವಾಹ ಚಿಲ್ಲರೆ ಇಲ್ಲ ಎಂದು ಏರು ಧ್ವನಿಯಲ್ಲಿ ಅಜ್ಜಿಗೆ ಗದರಿಸಿದ್ದಾನೆ. ಇದರಿಂದಾಗಿ ಅಜ್ಜಿಯು ನನ್ನ ಬಳಿ ಐದು ನೂರು ರೂಪಾಯಿ ನೋಟು ಇದೆ ಬಿಟ್ಟರೆ ಇಪ್ಪತ್ತು ರೂಪಾಯಿ ನೋಟು ಇದೆ ಎಂದು ಹೇಳಿದ್ದಾಳೆ.ಇದಕ್ಕೆ ನಿರ್ವಾಹ 20 ರೂಪಾಯಿ ನೋಟನ್ನು ಪಡೆದ 10 ರೂಪಾಯಿ ಟಿಕೇಟ್
ಹರಿದು ಅಜ್ಜಿಯನ್ನು ಚೌಡಯ್ಯದಾನಪುರಕ್ಕೆ ಇಳಿಸಿದ್ದಾನೆ. ಪಾಪ ಅಜ್ಜಿಗೆ ಸರಿಯಾಗಿ ಕಣ್ಣು ಬೇರೆ ಕಾಣೋಲ್ಲ. ಇಂತಹ ಸಂದರ್ಭದಲ್ಲಿ ಅಜ್ಜಿಯು ಬಸ್ ಇಳಿದ ತಕ್ಷಣ ಬಸ್ ನಿಲ್ದಾಣದ ಬಳಿ ಇರುವ ಶಂಭುಲಿಗಪ್ಪ ಭತ್ತದ
ಎಂಬುವವರ ಮನೆಯ ಬಳಿ ಆಶ್ರಯ ಪಡೆಯಲು ತೆರಳುವ ಸಂದರ್ಭದಲ್ಲಿ ಇನ್ನೇನೂ ಅಜ್ಜಿ ಗಟಾರದಲ್ಲಿ ಬೀಳುತ್ತದೆ ಎಂಬಷ್ಟರಲ್ಲಿ ಶಂಬುಲಿಂಗಪ್ಪ ಭತ್ತದ ಅವರು ಅಜ್ಜಿಯನ್ನು ರಕ್ಷಣೆ ಮಾಡಿ
ಮನೆಯಲ್ಲಿರಿಸಿದ್ದಾರೆ. ನಂತರ ಅಜ್ಜಿಯು ಬಸ್‌ನಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ನನಗೆ
ಎರಡು ತಿಂಗಳಾದರೂ ಪಗಾರ ಬಂದಿಲ್ಲ ಯಪ್ಪ..ಅದಕ್ಕೆ ಪೋಸ್ಟ್ ಆಫೀಸ್‌ನಲ್ಲಿ ಕೇಳಿದರಾಯಿತು ಎಂದು ಹರಿಹರಕ್ಕೆ ಹೊಂಟಿದ್ದೆ, ಗುತ್ತಲದಿಂದ ರಾಣೇಬೆನ್ನೂರಿಗೆ ಹೋಗುವ ನಿಮಿತ್ತ ಚೌಡಯ್ಯದಾನಪುರ ಗ್ರಾಮಕ್ಕೆ ಹೋಗುವ ಬಸ್ ಹತ್ತಿದೆ. ಪುಣ್ಯಾತ್ಮ ಚೇಂಜ್ ಇಲ್ಲದಕ್ಕ
ಚೌಡಯ್ಯದಾನಪುರಕ್ಕೆ ಟಿಕೇಟ್ ನೀಡಿ ಇಳಿಸಿದ ಎಂದು ಗ್ರಾಮಸ್ಥರ ಮುಂದೆ ಅಳಲು ತೋಡಿಕೊಂಡಿದ್ದಾಳೆ.
ಇದರಿಂದಾಗಿ ಗ್ರಾಮಸ್ಥರು ಆಕ್ರೋಶಗೊಂಡು ರಾಣೇಬೆನ್ನೂರಿಗೆ ಹೋಗಿರುವ ಬಸ್ ತಿರುಗಿ ಬರುವವರೆಗೂ ಕಾಯಿದು ಬಸ್ ಬಂದ ನಂತರ
ಗ್ರಾಮಸ್ಥರು ಅಜ್ಜಿಗೆ ಯಾಕೆ ಹೀಗೆ ಮಾಡಿರುವೆ ಎಂದು ಕೇಳಿದರೆ ಗ್ರಾಮಸ್ಥರಿಗೂ ಸಹ ಏರು ಧ್ವನಿಯಲ್ಲಿ ಮಾತಾಡಿ ನಂತರ ಗುತ್ತಲಕ್ಕೆ ಬಸ್
ತೆರಳಿತು.ಪುನಃ ಬಸ್ ಗುತ್ತಲದಿಂದ ಚೌಡಯ್ಯದಾನಪುಕ್ಕೆ ಬಂದಾಗ ಮತ್ತಷ್ಟು ಜನ ಗ್ರಾಮಸ್ಥರು ಕೂಡಿಕೊಂಡು ನಿರ್ವಾಹಕನಿಗೆ ತರಾಟೆ ತೆಗೆದುಕೊಂಡರು.
ಅಜ್ಜಿಯೇ ಚೌಡಯ್ಯದಾನಪುರಕ್ಕೆ ಟಿಕೇಟ್ ಕೇಳಿದಳು ಕೊಟ್ಟಿದ್ದೇನೆ‌ ಎಂಬ ಹಾರಿಕೆ ಉತ್ತರ ನೀಡಿದನು. ಇದರಿಂದ ಮತ್ತಷ್ಟು ಜನರು ಉದ್ವೇಗಕ್ಕೊಳಗಾಗಿ ನಿರ್ವಾಹನಿಗೆ ತರಾಟೆಗೆ ತೆಗೆದುಕೊಂಡರು…

ವರದಿ. ಸುರೇಶ್. ಕೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend