ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ತಾಲ್ಲೂಕು ಕಛೇರಿ ಯಲ್ಲಿ ಇಂದು (ಜೂ,27) ರಂದು “ನಾಡಪ್ರಭು” ಶ್ರೀ ಕೆಂಪೇಗೌಡರ ೫೧೨ ನೇ ಜಯಂತೋತ್ಸವ ಕಾರ್ಯಕ್ರಮ ತಾಲೂಕು ಆಡಳಿತ ವತಿಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಏಳುಕೋಟೆ ರವರು ಮಾತನಾಡಿ ನಾಡಪ್ರಭು ಕೆಂಪೇಗೌಡರ ಪಾರದರ್ಶಕ ಆಡಳಿತ ,ಕೆರೆ ಸಂರಕ್ಷಣೆ, ಜಾತ್ಯತೀತ ಸಿದ್ದಾಂತ, ಪ್ರಜೆಗಳ ನಡುವೆ ಉತ್ತಮ ಒಡನಾಟ ಉತ್ತಮ ಆಡಳಿತಕ್ಕೆ ಸಾಕ್ಷೀಯಾಯಿತು. ನಾಡಪ್ರಭು ಕೆಂಪೇಗೌಡರು ಹಾಕಿಕೊಟ್ಟ ಮಾರ್ಗದರ್ಶದಲ್ಲಿ ಎಲ್ಲರು ಸಾಗಿದರೆ ಉತ್ತಮ ಸಮಾಜ ನಿರ್ಮಾಣವಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ರಂಗನಾಥ್, ಮಂಜುನಾಥ್, ಓಬಣ್ಣ, ಇನ್ನು ಮುಂತಾದ ಸಿಬ್ಬಂದಿ ವರ್ಗದವರು ಉಪಸ್ಥಿತರು..
ವರದಿ.ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030