ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದಲ್ಲಿ ಕಾಲು ಗಾಯದಿಂದ ಕೂಡಿದ ಅನಾಮಧೇಯ ವ್ಯಕ್ತಿಯೊಬ್ಬ ಅರೆಹುಚ್ಚನಂತೆ ಹಾದಿಬೀದಿಯಲ್ಲಿ ತಿರುಗಾಡುತ್ತಿದ್ದು, ವ್ಯಕ್ತಿಯನ್ನು ಕಂಡು ಪಟ್ಟಣದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ, ಸಾರ್ವಜನಿಕರು ಭಯ ಭೀತಿಗೊಳಗಾಗಿದ್ದಾರೆ. ಕಳೆದ ಒಂದು ವರ್ಷದಿಂದ ಪಟ್ಟಣದಲ್ಲಿ ರಸ್ತೆಗಳಲ್ಲಿ ಓಡಾಡಿಕೊಂಡಿರುವ ಈ ವ್ಯಕ್ತಿ ಯಾವ ಊರಿನವನು ಎಂಬುದು ಗೊತ್ತಾಗಿಲ್ಲ. ಆದರೆ, ಹಿಂದಿ ಭಾಷೆ ಮಾತನಾಡುತ್ತಿದ್ದು, ಅನ್ನ ಆಹಾರವಿಲ್ಲದೆ ಪಟ್ಟಣದ ಕೆಲವು ಹೋಟೆಲ್ ನವರು ಕೊಟ್ಟ ಅಳಿದುಳಿದ ಆಹಾರವನ್ನು ಸೇವಿಸಿ,ರಾತ್ರಿಯಾದರೆ ಮೊಳಕಾಲ್ಮುರು ಪಟ್ಟಣದ ಖಾಸಗಿ ನಿಲ್ದಾಣದ ಹಾಗೂ ಪಟ್ಟಣದ ಪ್ರಮುಖ ರಸ್ತೆಯ ಅಂಗಡಿ-ಮುಂಗಟ್ಟುಗಳ ಬಳಿ, ಚಳಿ, ಗಾಳಿ, ಮಳೆಯನ್ನದೇ ವಾಸ ಮಾಡುತ್ತಿದ್ದಾನೆ. ಕಳೆದ ಒಂದು ವರ್ಷದಿಂದಲೂ ಅಲೆದಾಡುತ್ತಿರುವ ಈತನನ್ನು ಯಾವೊಬ್ಬ ಅಧಿಕಾರಿಯೂ ಗಮನಹರಿಸದಿರುವುದು ಸಾರ್ವಜನಿಕ ವಲಯದಲ್ಲಿ ಆತಂಕವನ್ನುಂಟು ಮಾಡಿದೆ. ವಾಹನಗಳು ಓಡಾಡುವ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುವ ಈತನಿಗೆ ಯಾವುದೇ ಅನಾಹುತವಾಗುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲೆಯ ನಿರಾಶ್ರಿತರ ಕೇಂದ್ರಕ್ಕೆ ಸೇರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030