ಚಿತ್ರದುರ್ಗ: ಮೊಳಕಾಲ್ಮೂರು: ಉಪ್ಪಿಗಿಂತ ರುಚಿ ಇಲ್ಲ ಎನ್ನುವ ಗಾದೆ ಮಾತಿನಂತೆ, ಪ್ರತಿಯೊಬ್ಬರ ಮನೆಯಲ್ಲೂ ಉಪ್ಪಿಗೆ ಪ್ರಾಮುಖ್ಯತೆಯಿದೆ. ಪ್ರತಿಯೊಂದು ಅಡುಗೆಗೂ ಉಪ್ಪುಬೇಕೆ ಬೇಕು.ಆದರೆ, ಪಟ್ಟಣದ ಬಹುತೇಕ ಹೋಲ್ ಸೇಲ್ ಪ್ರಾವಿಜನ್ ಸ್ಟೋರ್ ಗಳ ಮಾಲೀಕರು ಶುಚಿಯಾದ ಜಾಗದಲ್ಲಿ ಇಡಬೇಕಾದ ಉಪ್ಪನ್ನು, ಗೋಡನ್ ಗಳ ಬಳಿ ಉಪ್ಪಿನ ಪಾಕೆಟ್ ಗಳ ಚೀಲಗಳನ್ನು ಎಲ್ಲಂದರಲ್ಲಿ ಕಸದಂತೆ ಎಸೆದಿದ್ದಾರೆ. ಹಗಲು-ರಾತ್ರಿ ಉಪ್ಪಿನ ಚೀಲ ಗಳು ಅಲ್ಲೇ ಬಿದ್ದಿರುತ್ತವೆ. ಉಪ್ಪಿನ ಚೀಲದಲ್ಲಿ ಇಲಿ,ಹೆಗ್ಗಣಗಳು ಸೇರಿಕೊಂಡು ಕಿತ್ತು ತಿಂದಿವೆ. ಅಲ್ಲದೆ, ನಾಯಿ ಸೇರಿದಂತೆ, ಇನ್ನಿತರ ಪ್ರಾಣಿಗಳು ಚೀಲಗಳ ಬಳಿ ಮಲಗಿ ಗಲೀಜು ಮಾಡಿದರೂ ಸಹ,ಸ್ವಚ್ಛತೆ ಕಾಪಾಡದ ಅಂಗಡಿ ಮಾಲೀಕರು, ತಾಲೂಕಿನಾದ್ಯಂತ ಅಂಗಡಿ-ಮುಂಗಟ್ಟುಗಳ ಚಿಲ್ಲರೆ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಇಂತಹ ಉಪ್ಪನ್ನು ನೀಡುತ್ತಿದ್ದಾರೆ. ಜೊತೆಗೆ,ಇದನ್ನು ಸೇವಿಸಿವ ಜನರಿಗೆ ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಜನರ ಆರೋಗ್ಯದ ದೃಷ್ಟಿಯಿಂದ ಪ್ರಾವಿಜನ್ ಸ್ಟೋರ್ ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ, ಕ್ರಮಕೈಗೊಳ್ಳಬೇಕೆಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030