ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಎಪಿಎಂಸಿ ಕಚೇರಿಯ ಸಭಾಂಗಣದಲ್ಲಿ ಇಂದು (ಜೂ-12) ಚೇತನ್ ಪೌಂಡೇಷನ್ ವತಿಯಿಂದ ಮೊಳಕಾಲ್ಮೂರು ತಾಲೂಕಿನ ದೇವದಾಸಿ ಮಹಿಳೆಯರಿಗೆ ಆಹಾರ ಧಾನ್ಯ ದಿನಸಿ ವಿತರಣೆ ಮತ್ತು ಮಹಿಳೆಯರ ಹಕ್ಕುಗಳು, ಕೋವಿಡ್ ಸಂಧರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಮಾನ್ಯ ತಹಶೀಲ್ದಾರರಾದ ಟಿ ಸುರೇಶ್ ಕುಮಾರ್ ರವರು ಹಳ್ಳಿಗಳಲ್ಲಿ ಸಾಕಷ್ಟು ಕರೋನ ರೋಗ ಕುರಿತು ತಪ್ಪು ಕಲ್ಪನೆಗಳಿವೆ, ಆಲೋಚನೆಗಳಿವೆ ಆದರೆ ವ್ಯಾಕ್ಸಿನೇಷನ್ ಹಾಕಿಸುವುದರಿಂದ ತಾವುಗಳು ಆರೋಗ್ಯವನ್ನು ಜಾಗರೂಕತೆಯಿಂದ ನೋಡಿಕೋಳ್ಳಬೇಕು ಮತ್ತು ಶತಶತಮಾನಗಳಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಳಿತಕ್ಕೊಳಗಾದ ದೌರ್ಜನ್ಯಕ್ಕಕೊಳಗಾದ ಸಂಕಷ್ಟಕ್ಕೊಳಗಾದ ಸಮುದಾಯ ದೇವದಾಸಿ ಸಮುದಾಯವಾಗಿದೆ ಆದ್ದರಿಂದ ತಾವುಗಳು ತಮ್ಮ ಆರೋಗ್ಯದ ಮತ್ತು ಹಕ್ಕುಗಳು ಕುರಿತು ತಿಳಿದುಕೊಳ್ಳಬೇಕಾಗಿದೆ ಎಂದರು. ಈ ಸಂಧರ್ಭದಲ್ಲಿ ವಕೀಲರಾದ ಪ್ರಸನ್ನ ಕಲ್ಲಿನಕೋಟೆ ಮತ್ತು ಡಾ” ಚನ್ನಬಸವರಾಜ, ರಾಂಪುರ ನಾಡಕಚೇರಿ ಆರ್ ಐ ಗೋಪಾಲ್, ಕಾರ್ಯಕ್ರಮ ಆಯೋಜನೆ ಮಾಡಿದ ಭಟ್ರಹಳ್ಳಿ ಹಾಸ್ಯ ನಟ ಧನಂಜಯ, ಹಾಗೂ ಇನ್ನೂ ಮುಂತಾದವರು ಹಾಜರಿದ್ದರು..
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030