ದಲಿತ ಕವಿ ಸಿದ್ದಲಿಂಗಯ್ಯ ಅವರ 62 ವರ್ಷದ ಬದುಕಿನಲ್ಲಿ ಬರೋಬ್ಬರಿ 40 ವರ್ಷ ಹೋರಾಟದಿಂದಲೇ ಸವೆಸಿದರು ಎಂದು ಆಲೂರು ಜೈಭೀಮ್ ಗೆಳೆಯರ ಬಳಗದ ಯುವಕರು ಸ್ಮರಿಸಿದರು.ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಗಡಿ ಗ್ರಾಮ ಆಲೂರಿನ ಜೈಭೀಮ್ ಗೆಳೆಯರ ಬಳಗ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಿದ್ದಲಿಂಗಯ್ಯನವರ ಶ್ರದ್ಧಾಂಜಲಿ ಸಭೆಯಲ್ಲಿ ದಯಾನಂದ್ ಮಾತನಾಡಿ ಪಂಪ, ನಾಡೋಜ ಪ್ರಶಸ್ತಿ ಪುರಸ್ಕೃತರು, ದಲಿತ ಬಂಡಾಯ ಸಾಹಿತ್ಯವನ್ನು ತಮ್ಮ ಕವನಗಳಲ್ಲಿ ಶ್ರೀಮಂತಗೊಳಿಸಿದ ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ ನವರ ಎಂದು ಸ್ಮರಿಸಿದರು.
ಓಬಳೇಶ್ ಮಾತನಾಡಿ ಸಿದ್ದಲಿಂಗಯ್ಯ ಅಪರೂಪದ ದಲಿತ ಕವಿ. ಅವರು ನಮ್ಮನ್ನಗಲಿದ್ದಾರೆ, ಆದರೆ ಅವರು ಬಿಟ್ಟುಹೋಗಿರುವ ಹೋರಾಟದ ಹಾಡುಗಳು ನಮ್ಮ ಜೊತೆಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ
ರಾಮಾಂಜನೇಯ. ಶೇಷಾ ಗಿರಿಬಾಬು, ಕೊಟ್ರೇಶ್, ಮಂಜು, ನಟರಾಜ್, ಶಶಾಂಕ್, ಮಲ್ಲೇಶ್, ವಿಜಯ್, ಸಂತೋಷ ಸೇರಿ ಎಲ್ಲಾ ಯುವಕರು ಭಾಗಿಯಾಗಿದ್ದರು,.
ವರದಿ ಕೆ ಎಸ್ ವೀರೇಶ್.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030