ಚಿತ್ರದುರ್ಗ: ಮೊಳಕಾಲ್ಮೂರು/ ಚಿತ್ರದುರ್ಗ ನಗರದ ರಂಗಭೂಮಿಯ ಹಿರಿಯ ಕಲಾವಿದರಾದ ಶ್ರೀಮತಿ ರವೀನಾ ಕುಮಾರಿ ಹಾಗೂ ಶ್ರೀ ಎಸ್. ಎ.ವಿಶ್ವನಾಥ್ ರಾವ್ ರವರ ಮಗನಾದ ಶ್ರೀ ವಿ.ಜೀವನ್ ಕುಮಾರ್ ರವರು ಮೊಳಕಾಲ್ಮೂರು ತಾಲ್ಲೂಕಿನ ಸಿದ್ದಯ್ಯನಕೋಟೆಯ ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾ ಮಠಕ್ಕೆ ಆಹಾರ ಸಾಮಾಗ್ರಿಗಳನ್ನು ನೀಡಿದರು.
ಶ್ರೀಮಠದ ಪೀಠಾಧ್ಯಕ್ಷರಾದ ಪೂಜ್ಯ ಬಸವಲಿಂಗ ಸ್ವಾಮೀಜಿಯವರು, ರಂಗ ಕಲಾ ಕೌಸ್ತುಭ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎಸ್.ಎ.ವಿಶ್ವನಾಥ್ ರಾವ್, ರಂಗಭೂಮಿ ಹಿರಿಯ ಕಲಾವಿದೆ ಶ್ರೀಮತಿ ರವೀನಾ ಕುಮಾರಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಓ.ಮುರಾರ್ಜಿ, ರಂಗಭೂಮಿ ಕಲಾವಿದೆ ಶ್ರೀಮತಿ ವಿ.ಲೇಖಪ್ರಿಯ, ಸಾಫ್ಟವೇರ್ ಇಂಜಿನೀಯರ್ ವಿ.ಜೀವನ್ ಕುಮಾರ್, ಎಂ.ಎಲ್. ಗ್ರಂಥ್ ಜ್ಞಾನ್ ಆಶೀರ್ವಾದ್, ಎಸ್. ಪರಮೇಶ್, ಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ್ ಉಪಸ್ಥಿತರಿದ್ದರು.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030