ಚಿತ್ರದುರ್ಗ: ಮೊಳಕಾಲ್ಮೂರು (ಜೂ- 4) ಕೂರೋನಾ ಮಹಾಮಾರಿ ಸರಪಳಿಯನ್ನು ತುಂಡರಿಸುವ ಸಲುವಾಗಿ ವಿಧಿಸಿರುವ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಟ್ಯಾಕ್ಸಿ ಚಾಲಕರುಗಳಿಗೆ ‘ಆಹಾರ ಕಿಟ್’ ವಿತರಿಸಲಾಯಿತು.. ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಮೊಳಕಾಲ್ಮೂರು ಟ್ಯಾಕ್ಸಿ ಚಾಲಕರುಗಳಿಗೆ ಆಹಾರ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು ಅವರು ಚಾಲನೆ ನೀಡಿ ವಿತರಿಸಿದರು. ಈ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಎನ್.ಕೆ.ದಾದಪೀರ್, ಅಧ್ಯಕ್ಷತೆಯಲ್ಲಿ ಚಾಲಕರ ಯುನಿಯನ್ ಟ್ರೇಡ್ ಅಧ್ಯಕ್ಷರಾದ ಗಿರಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ನಾಗೇಶ್, ಮೊಳಕಾಲ್ಮೂರು ಪಟ್ಟಣ ಪಂಚಾಯತಿ ಸದಸ್ಯರಾದ ಅಬ್ದುಲ್ಲಾ, ಗೋಪಾಲ್, ನಬೀಲ್, ಅಲ್ಪಸಂಖ್ಯಾತ ತಾಲ್ಲೂಕು ಅಧ್ಯಕ್ಷರಾದ ಜುಬೇರ್, ಮುಖಂಡರಾದ ಭಕ್ತ ಪ್ರಹ್ಲಾದ್, ಟಿ.ಎಸ್.ಪಾಲಯ್ಯ, ಜಿಯಾವುಲ್ಲಾ,
ಕಿರಣ್ ವಾಂಜ್ರೆ, ಪ್ರದೀಪ್, ಯುವ ಕಾಂಗ್ರೆಸ್ ಕಾರ್ಯಧ್ಯಕ್ಷರಾದ ಜಗದೀಶ್, ಗೌಸ್, ಬಾಲಚೌಡಪ್ಪ, ನಾಗರಾಜ್, ಶ್ರೀನಿವಾಸ್, ತಾಲ್ಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮೆಹಬೂಬ್ ಬಾಷ, ಮಾಲೀಕ್, ಪವನ್, ಜಾಫರ್, ದಿವಾಕರ್, ಓಬಣ್ಣ, ಮುಂತಾದ ಮುಖಂಡರು ಉಪಸ್ಥಿತರಿದ್ದರು.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030