ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಹಿರೇಕೆರೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಹಾಗೂ ಅವರ ಸಹಾಯಕರಿಗೆ ಲಾಕ್ಡೌನ್ ಸಮಯದಲ್ಲಿ ಉಂಟಾಗುವ ಊಟದ ಸಮಸ್ಯೆಯನ್ನು ನೀಗಿಸುವ ಸಲುವಾಗಿ ಕರುನಾಡು ಜಿಯಾ ಮತ್ತು ಗೆಳೆಯರ ವತಿಯಿಂದ ಲಾಕ್ಡೌನ್ ಮುಗಿಯುವವರೆಗೂ ಉಚಿತ ಮಧ್ಯಾಹ್ನದ ಊಟದ ವ್ಯವಸ್ಥೆಗೆ ತಾಲ್ಲೂಕಿನ ದಂಡಾಧಿಕಾರಿಗಳಾದ ಶ್ರಿ ಸುರೇಶ್ ರವರು, ತಾಲ್ಲೂಕು ವೈದ್ಯಾಧಿಕಾರಿಗಳಾದ ಸುಧಾರವರು ಇಂದು ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಮಹಮ್ಮದ್ ಖಾಸಿಂ ಟಿ ಕೆ, ಬಾಲಚೌಡಪ್ಪ ಡಿ ಜಿ, ಡಾ|| ದಾದಾಪೀರ್, ಕಿರಣ್ ವಾಂಜ್ರೆ, ಪ್ರದೀಪ್, ಮಲ್ಲಿಕಾರ್ಜುನ, ಗೋವಿಂದರಾಜು, ಮಾಲಿಕ್, ಬಸವರಾಜ್, ವೆಂಕಟೇಶ್, ಶಾಂತಕುಮಾರ್, ಪವನ್, ಶಿವು, ಡಾ. ರಾಘವೇಂದ್ರ, ಶಿಲ್ಪ, ಚನ್ನಬಸಪ್ಪ, ಸ್ನೇಹ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030