ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕೆ ಕರ್ನಾರಹಟ್ಟಿ ಗ್ರಾಮ
ಕೆ .ಕರ್ನಾರಹಟ್ಟಿ ಗ್ರಾಮದ ಮಂಜುನಾಥ(26ವರ್ಷ) ನೇಣಿಗೆ ಶರಣು
ತಾಲೂಕಿನ ಕೆ. ಕರ್ನಾರಹಟ್ಟಿ ಗ್ರಾಮದ ನಾಗರಾಜ ಎಂಬವರಿಗೆ 3 ಜನ ಮಕ್ಕಳಿದ್ದು ಅದರಲ್ಲಿ 2ನೇ ಮಗನಾದ ಮಂಜುನಾಥನಿಗೆ ಮಂಜುನಾಥನ ತಂದೆ ನಾಗರಾಜ ಮತ್ತು ಮಂಜುನಾಥನ ಹೆಂಡತಿ ಇವರಿಬ್ಬರೂ ಸೇರಿ ದಿನನಿತ್ಯ ದುಡಿದ ಹಣವನ್ನು ಮನೆಯ ಸಂಸಾರಕ್ಕೆ ಕೊಡದಿದ್ದರೆ ಹೇಗೆ ಎಂದು ಮಂಜುನಾಥನಿಗೆ ಬುದ್ಧಿ ಹೇಳಿದ್ದಕ್ಕೆ ದಿನಾಂಕ 25/5/2021. ಸಾಯಂಕಾಲ 6:00 ಗಂಟೆ ಯಿಂದ 26 .5 .2021 ಬೆಳಿಗ್ಗೆ 6:00 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯಿಂದ ಹೊರಗಡೆ ಹೋಗಿ ಕೆಳಗಳ ಕರ್ನಾರಹಟ್ಟಿ ಗ್ರಾಮದ ಬೋಸ ಮಲ್ಲಯ್ಯ ಎಂಬುವವರ ಗುಡಿಸಲಿನಲ್ಲಿ ಮೇಲಿನ ತೀರಿಗೆ ಹಗ್ಗ ಕಟ್ಟಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆಎಂದು ಮೃತನ ತಂದೆಯಾದ ನಾಗರಾಜ ಕೊಟ್ಟ ದೂರಿನ ಮೇರೆಗೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ವರದಿ.ಡಿ.ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030