ಕ್ಷೀರ ಭಾಗ್ಯದ ಹಾಲಿನ ಪುಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮಹಾಲಿಂಗಪೂರ ಪುರಸಭೆ ಅಧ್ಯಕ್ಷಯ ಪತಿಯನ್ನು ಸಿಐಡಿ ಅಧಿಕಾರಿಗಳು ಬಂಧಸಿದ ಘಟನೆಗೆ ಸಂಭಂದಿಸಿದಂತೆ ತೇರದಾಳ ಮತಕ್ಷೇತ್ರದ ಮಾಜಿ ಶಾಸಕಿಯಿಂದ ಪತ್ರಿಕಾಘೋಷ್ಠಿ ಮಾನ್ಯ ಸಿದ್ದರಾಮಯ್ಯನವರು ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಹಾಕುವ ಮತ್ತು ರೈತರ ಹೈನುಗಾರಿಕೆ ಉತ್ತೇಜಿಸುವ ಸಲುವಾಗಿ ಈ ಕ್ಷೀರ ಭಾಗ್ಯ ಯೋಜನೆ ಜಾರಿಗೆ ತಂದಿದ್ದರು, ಆದರೆ ತೇರದಾಳ ಕ್ಷೇತ್ರದ ಶಾಸಕರ ಆಪ್ತ ಮತ್ತು ಮಹಾಲಿಂಗಪೂರ ಪುರಸಭೆ ಅಧ್ಯಕ್ಷಯ ಪತಿ ಶಿವಾನಂದ ಅಂಗಡಿ ಅಕ್ರಮವಾಗಿ ಸಂಗ್ರಹಿಸಿ ಸಿಐಡಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಬಡವರ ಮಕ್ಕಳ ಪೌಷ್ಟಿಕ ಹಾಲಿನ ಪೌಡರ ಈ ತರಹ ಸಂಗ್ರಹಿಸಿ ಇದನ್ನು ಏನು ಮಾಡುತ್ತಿದ್ದರು ಮತ್ತು ಇಷ್ಟೊಂದು ಪ್ರಮಾಣದ ಹಾಲಿನ ಪೌಡರ ಸಂಗ್ರಹನೆಗೆ ಯಾರ ಕುಮ್ಮಕ್ಕು ಒದರ ಹಿಂದಿನ ಬಲಿಷ್ಠ ಕೈ ಯಾರದಿದೆ, ಎಂದು ಸಿಐಡಿ ಅಧಿಕಾರಿಗಳು ಯಾವುದೆ ಒತ್ತಾಯಕ್ಕೆ ಒಳಗಾದೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆ ಎಂದು ಒತ್ತಾಯಿಸಿ ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ತಮ್ಮ ಪಕ್ಷದ ಮುಖಂಡರು ಕಾರ್ಯಕರ್ತರೊಂದಿಗೆ ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದರು..
ವರದಿ.ಮಹಾಲಿಂಗ ಗಗ್ಗರಿ
ಮಹಾಲಿಂಗಪೂರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030