ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಜಿಕೆರೆ ಸುಮಂಗಳಮ್ಮ ನಿಧನ
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ತಾಲೂಕಿನ ಬಿಜಿಕೆರೆ ವಾಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಮಂಗಳಮ್ಮ (69) ಬುಧವಾರ ಬೆಳಗಿನ ಜಾವ 1 ಘಂಟೆಗೆ ಹೃದಯಾಘಾತದಿಂದ ನಿಧನರಾದರು.
ಪತಿ ವೀರಭದ್ರಪ್ಪ, ಓರ್ವ ಮಗ, ಓರ್ವ ಮಗಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತಿಮ ದರ್ಶನ ಪಡೆಯಲು ಬುಧವಾರ ಬೆಳಿಗ್ಗೆ ನಗರದ ವಿಪಿ ಬಡಾವಣೆಯ ಮೃತ್ಯುಂಜಯ ಕಾಂಪೌಂಡ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಮದ್ಯಾಹ್ನ 3 ಘಂಟೆಗೆ ನಂತರ ಬಿಜಿಕೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೃಷಿ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ 2020 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಎಸ್. ವಿ ರಾಜು
9448396260
ಕಿರಣ್ ಎಸ್.ಸಿ
9448396276
ಅವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.
ವರದಿ,ಕೆ ಎಸ್, ವೀರೇಶ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030