ಕೋಲೆ ಮಾಡಿದ್ದ ಆರೋಪಿಗಳನ್ನು ನಾಲ್ಕೆ ದಿನದಲ್ಲಿ ಹಿಡಿದು ಜೈಲಿಗಟ್ಟಿದ ಲೋಕಾಪುರ ಪೋಲಿಸರ ತಂಡ.
ಪ್ರತಿವರ್ಷ ಬಾಗಲಕೋಟ ಜಿಲ್ಲೆ ಕಬ್ಬಿನ ಹಂಗಾಮಿನಲ್ಲಿ ಮುಳುಗಿರುತ್ತದೆ ಈ ಜಿಲ್ಲೆ ಈದಿಗ ಸಕ್ಕರೆ ನಾಡಾಗಿ ಬೆಳೆಯುತ್ತಿದೆ ಇಲ್ಲಿ ಅಸಂಖ್ಯಾತ ಜನ ಕಬ್ಬು ಕಾಟಾವು ಕಾರ್ಮಿಕರು ಕೆಲಸದಲ್ಲಿ ತೊಡಗಿರುತ್ತಾರೆ ಸ್ಥಳೀಯ ಇದರಲ್ಲಿ ಮಹಾರಾಷ್ಟ್ರದಿಂದ ಸಾವಿರಾರು ಕಾರ್ಮಿಕರು ಕುಟುಂಬದ ಸಮೇತವಾಗಿ ಬಂದು ಕಬ್ಬು ಕಟಾವು ಮಾಡುತ್ತಾರೆ ಇದು ವಾಡಿಕೆಯಾಗಿ ಬೆಳೆಯುತ್ತಿದೆ,ಆದರೆ ಮುಧೋಳ ತಾಲ್ಲೂಕಿನ ಲೋಕಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಇದೆ ಕಬ್ಬು ಕಟಾವು ಮಾಡಲು ಬಂದ ಬೆಳಗಾವಿ ಜಿಲ್ಲೆಯ ಲೋನಗಾಂವ ಗ್ರಾಮದ ಯುವಕನೊಬ್ಬ ಕೋಲೆಯಾಗಿರುತ್ತಾನೆ ಈ ಸಂಬಂದ ಆತನ ತಂದೆ ಲೋಕಾಪುರ ಪೋಲಿಸ್ ಠಾಣೆಯಲ್ಲಿ ಕಂಪ್ಲೆಟ್( ಪ್ರಕರಣ) ದಾಖಲಿಸುತ್ತಾನೆ ತನ್ನ ಮಗನ್ನು ಆತನಿಗೆ ಕೆಲಸ ಕೊಡಿಸಿದ ವ್ಯಕ್ತಿಯೆ ಅವನನ್ನು ಕೋಲೆ ಮಾಡಿದ್ದಾನೆ ಎಂದು ಪ್ರಕರಣ ದಾಖಲಿಸುತ್ತಾನೆ ಇದನ್ನು ತಕ್ಷಣ ಪಿಎಸ್ಐ ಶಿವಶಂಕರ ಮುಕರಿ ಅವರು ಮುಧೋಳ ವೃತ್ತನಿರೀಕ್ಷಕರಾದ ಎಚ್.ಆರ್.ಪಾಟೀಲ ( ಸಿಪಿಐ) ಅವರಿಗೆ ಮಾಹಿತಿ ನೀಡುತ್ತಾರೆ ಕಾರ್ಯಪ್ರವೃತರಾದ ಸಿಪಿಐ ಅವರು ಜಮಖಂಡಿಯ ಡಿವೈಎಸ್ಪಿ ಮತ್ತು ಬಾಗಲಕೋಟ ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿಗಳಿಗೆ ತಿಳಿಸಿ ಅವರಿಂದ ಮಾರ್ಗದರ್ಶನ ಪಡೆದು ತಮ್ಮ ತಂಡದೊಂದಿಗೆ ಕೋಲೆ ಮಾಡಿದ ವ್ಯಕ್ತಿಗಳ ಹಿಂದೆ ಬೆನ್ನಟ್ಟಿ ನಾಲ್ಕೆ ದಿನದಲ್ಲಿ ಮೂರು ಜನ ಆರೋಪಿಗಳನ್ನು ಹಿಡಿದು ಜೈಲಿಗಟ್ಟಿದ್ದಾರೆ ಆರೋಪಿಗಳಾದ
ಜ್ಞಾನೇಶ ರಾಠೋಡ.ಸಚೀನ ರಾಠೋಡ ಭಾಹು ರಾಠೋಡ ಎಂಬುವರಾಗಿದ್ದು ಕೋಲೆಗೆ ಕಾರಣ ಜ್ಞಾನೇಶ ಎಂಬುವರ ಕಡೆ ಮೃತ ವ್ಯಕ್ತಿ ಯಶವಂತ ಸೋನಕಾಂಬಳೆ ಒಂದು ವರೆ ಲಕ್ಷ ಮುಂಗಡ ಹಣ ಪಡೆದಿರುತ್ತಾನೆ ಆದರೆ ಯಶವಂತ ಇತನ ಕಡೆ ಕೂಲಿ ಮಾಡದೆ ಜ್ಞಾನೇಶನ ಸಂಭಂದಿಕರ ಕಬ್ಬು ಕಟಾವು ಗ್ಯಾಂಗಿನಲ್ಲಿ ಕೆಲಸ ಮಾಡುತ್ತಿರುವುದನ್ನು ಗಮನಿಸಿ ಈ ಸಿಟ್ಟಿಗೆದ್ದು ತನ್ನ ಸಹಚರರಿಂದ ಯಶವಂತನನ್ನು ಕೋಲೆ ಮಾಡಿರುತ್ತಾನೆ ಎಂದು ದೂರಿನಲ್ಲಿ ಉಲ್ಲೆಕಿಸಿದಂತೆ ಆರೋಪಿತರನ್ನು ಸೂಕ್ಷ್ಮತೆಯಿಂದ ತಿರ್ವವಾಗಿ ತನಿಖೆಗೆ ಒಳಪಡಿಸಿದಾಗ ಕೋಲೆ ಮಾಡಿರುವುದಾಗಿ ಸಾಕ್ಷಾಧಾರ ಸಮೇತ ಒಪ್ಪಕೊಂಡಿರುತ್ತಾರೆ.ತನಿಖೆ ತಂಡಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ..
ವರದಿ.ಶಿವಶಂಕರ ಕಡಬಲ್ಲವರ
ಮುಧೋಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030