ಬಳ್ಳಾರಿಯಲ್ಲಿ ಲಕ್ಷ ಲಕ್ಷ ಲಂಚಕ್ಕೆ ಕೈ ಚಾಚಿದ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…!!!

Listen to this article

ಬಳ್ಳಾರಿ: ನಗರದ 20 ಎಕರೆ ಜಮೀನನ್ನು ಲೇಔಟ್ ಆಗಿ ಅಭಿವೃದ್ದಿ ಮಾಡಲು ಪ್ರಾವಿಜನಲ್ ಅನುಮೋದನೆ ನೀಡಲು ಲಕ್ಷ ಲಕ್ಷ ರೂ ಲಂಚ ಪಡೆದ ಮೂವರು ಅಧಿಕಾರಿಗಳು, ಸಾವಿರಾರು ರೂಪಾಯಿ ಪಡೆದ ಮೂವರು ಸಿಬ್ಬಂದಿಯನ್ನು ಇಂದು ನಡೆದ ಲೋಕಾಯುಕ್ತ ದಾಳಿಯಲ್ಲಿ ಲಂಚದ ಹಣ ಸಮೇತ ಬಂಧಿಸಲಾಗಿದೆ.


ಈರೇಶ್ ಎಂಬ ವ್ಯಕ್ತಿ ಲೇ ಔಟ್ ಅಭಿವೃದ್ಧಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅದಕ್ಕೆ ಅನುಮೋದನೆ ನೀಡಲು ವಿಳಂಬ ಮಾಡಿ. ಲಂಚ ನೀಡಿದರೆ ಮಾತ್ರ ಅನುಮೋದನೆ ನೀಡಲಿದೆಂದು ಮಾತುಕತೆ ನಡೆಸಿದ್ದರು.
ಈ ಬಗ್ಗೆ ಈರೇಶ್ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಇಂದು ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ
ಬಳ್ಳಾರಿಯ ನಗರಾಭಿವೃದ್ದಿ ಪ್ರಾಧಿಕಾರ(ಬುಡಾ) ಆಯುಕ್ತ ರಮೇಶ ವಟಗಲ್ 5 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ.
ನಗರ ಯೋಜನಾ ಸದಸ್ಯ ಕಲ್ಲಿನಾಥ, 6 ಲಕ್ಷ ಲಂಚದ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ.‌
ಬುಡಾದ ನಗರ ಯೋಜನಾ ಸಹಾಯಕಿ ಯಶಸ್ವಿನಿ 3 ಲಕ್ಷ ರೂ ಲಂಚ ನೀಡಬೆರಕೆಂದು ಬೇಡಿಕೆ ಇಟ್ಟಿದ್ದರು.


ಇನ್ನು ಪೋನ್ ಪೇನಲ್ಲಿ 10 ಸಾವಿರ ಲಂಚದ ಹಣ ಪಡೆದ ಬುಡಾ ಮ್ಯಾನೇಜರ್ ನಾರಾಯಣ, ಅದೇ ರೀತಿ ಫೋನ್ ಪೇ ಮೂಲಕ 20 ಸಾವಿರ ಪಡೆದು. 60 ಸಾವಿರಕ್ಕೆ ಲಂಚದ ಬೇಡಿಕೆ ಇಟ್ಟಿದ್ದ ಕೇಸ್ ವರ್ಕರ್ ಶಂಕರ್,
ಖಾಜಾ ಹುಸೇನ್, ಜೂನಿಯರ್ ಇಂಜಿನಿಯರ್ , ಫೋನ್ ಪೇ ಮೂಲಕ 20 ಲಂಚ ಕ್ಕಾಗಿ ಬೇಡಿಕೆ ಇಟ್ಟಿದ್ದ ಇವರನ್ನು ಬಂಧಿಸಲಾಗಿದೆ…

ವರದಿ. ಮಹಾಲಿಂಗ ಗಗ್ಗರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend