ಶಿವಶಂಕರ ಸ್ವಾಮೀಜಿ ನಾಮಪತ್ರ ಸಲ್ಲಿಸಿದ್ದಕ್ಕೆ ಅಂಭಾದಾಸ ಅಭಿಮಾನಿಗಳ ಆಕ್ರೋಶ…!!!

Listen to this article

ಶಿವಶಂಕರ ಸ್ವಾಮೀಜಿ ನಾಮಪತ್ರ ಸಲ್ಲಿಸಿದ್ದಕ್ಕೆ ಅಂಭಾದಾಸ ಅಭಿಮಾನಿಗಳ ಆಕ್ರೋಶ

ರಬಕವಿ-ಬನಹಟ್ಟಿ: ರಬಕವಿಯ ತಮ್ಮ ನಿವಾಸದಲ್ಲಿದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತೇರದಾಳ ವಿಧಾನಸಭಾ ಮತಕ್ಷೇತ್ರವನ್ನು ಚುನಾವಣೆಗೆ ಆಯ್ಕೆ ಮಾಡಿಕೊಂಡು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳಲು ತಿಳಿಸಿ ಹುಬ್ಬಳ್ಳಿಯ ವೀರ ಭಿಕ್ಷಾಮಠದ ಪೀಠಾಧ್ಯಾಕ್ಷ ಶಿವಶಂಕರ ಸ್ವಾಮೀಜಿ ಈಗ ತಾವೆ ಚುನಾವಣೆಗೆ ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವುದು ತಮಗೆ ನಂಬಿಕೆ ದ್ರೋಹ ಎಸಕಿದರು ಎಂದು ಆಕ್ರೋಶ ಹೊರ ಹಾಕಿದರು. ಸ್ಥಳೀಯವಾಗಿ ನೇಕಾರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಈ ಕುರುಹೀನಶೆಟ್ಟಿ ಪಿಠಾಧ್ಯಾಕ್ಷ ಸ್ಥಾನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಶಿವಶಂಕರ ಸ್ವಾಮೀಜಿ ಪೀಠತ್ಯಾಗ ಮಾಡಿದ್ದು ಮಾಹಿತಿ ಇಲ್ಲ ಸ್ವಾಮೀಜಿಗಳಿಗೆ ವಿರೋಧ ಮಾಡುವುದಾಗಿ ತೇರದಾಳ ಕುರುಹೀನಶೆಟ್ಟಿ ನಗರ ಘಟಕದ ಮಹಿಳಾ ಅಧ್ಯಕ್ಷ ಗೌರಕ್ಕ ಚಿಚಖಂಡಿ ಅಸಮಾಧಾನ ಹೊರ ಹಾಕಿದರು. ಈಗಾಗಲೇ ನಾಮಪತ್ರ ಸಲ್ಲಿಸಿದ್ದು ಸ್ವಾಮಿಗಳ ಮನವೂಲಿಕೆ ಪ್ರಯತ್ನ ಮಾಡುವುದಾಗಿ ತಿಳಿಸಿದ ಅಭ್ಯರ್ಥಿ ಯಾವುದೆ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲವೆಂದು ಗಂಟಾಘೋಷವಾಗಿ ನುಡಿದರು. ತೇರದಾಳ ಮತಕ್ಷೇತ್ರದ ಎಲ್ಲ ಸಮಾಜಗಳ ಜೋತೆ ಒಳ್ಳೆಯ ಭಾಂದ್ಯವ್ಯ ಹೊಂದಿದ್ದು ಜಾತ್ಯತೀತಲಾಗಿ ಬೆಂಬಲ ಪಡೆಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶಶಿಕಾಂತ ಬಂಡಿವಡ್ಡರ,ಶಿವಾನಂದ ಕುಳ್ಳೊಳ್ಳಿ ಮತ್ತು ಅಂಬಾದಾಸ ಕಾಮೂರ್ತಿ ಅಭಿಮಾನಿಗಳು ಕಾರ್ಯಕರ್ತರು ಮುಖಂಡರು ಉಪಸ್ಥತಿಯಲ್ಲಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend