ಮೆರವಣಿಗೆ ಮೂಲಕ ಕಾರ್ಯಕರ್ತರೊಡನೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ರಬಕವಿ-ಬನಹಟ್ಟಿ: ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಸಿದ್ದು ಕೊಣ್ಣುರ ಸಾವಿರಾರು ಕಾರ್ಯಕರ್ತರ ಜೋತೆ ರಬಕವಿಯ ಬಸ್ ನಿಲ್ದಾಣದಿಂದ ಮೆರವಣಿಗೆ ಮುಖಾಂತರ ಮುಖ್ಯಖ ರಸ್ತೆಯಲ್ಲಿ ಹಾದು ಬನಹಟ್ಟಿಯ ತಹಸಿಲ್ದಾರ ಕಛೇರಿಗೆ ಬಂದು ಮಾಜಿ ಸಚಿವೆ ಶ್ರೀಮತಿ ಉಮಾಶ್ರೀಯವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ದಾರಿ ಉದ್ದಕ್ಕೂ ಎಲ್ಲ ಕಾರ್ಯಕರ್ತರು ಶಾಲು ಟೋಪಿ ಧರಸಿ ಸಿದ್ದು ಕೊಣ್ಣುರ ಪರ ಘೋಷಿಣೆ ಕೂಗಿ ಜೈಕಾರ ಹಾಕುತಿರುವುದು ಇಮ್ಮಡಿಯಾಗಿತ್ತು. ದಾರಿ ಉದ್ದಕ್ಕೂ ಹಸ್ತದ ಧ್ವಜ ರಾರಾಜಿಸುತ್ತಿರುವುದು ಆಕರ್ಷಣಿಯವಾಗಿ ಜಾಂಜ ಪತಾಕೆ ಮತ್ತು ಸಾಂಬಳ ವಾದ್ಯ ಕಲಾವಿದರ ತಂಡಗಳ ವಾದನ ಜೋರಾಗಿತ್ತು. ಸಿದ್ದು ಕೊಣ್ಣುರರವರ ಬೆಂಬಲಿಗರು, ಕಾರ್ಯಕರ್ತರು ಘೋಷಿಣೆ ಮೊಳಗಿಸಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನೆರೆಸಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವೆ ಶ್ರೀ ಮತಿ ಉಮಾಶ್ರೀ,ಲಕ್ಷ್ಮಣ್ ದೇಸಾರಟ್ಟಿ,ಧರೆಪ್ಪ ಸಾಂಗ್ಲಿಕರ,ಯಲ್ಲನಗೌಡ ಪಾಟೀಲ್, ದುಂಡಪ್ಪ ಜಾಧವ,ಪ್ರಭು ಗಸ್ತಿ,ಹಣಮಂತ ಕೊಣ್ಣುರ ಹಾಗೂ ಸಿದ್ದು ಕೊಣ್ಣುರ ಬೆಂಬಲಿಗರು,ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥತರಿದ್ದರು
ವರದಿ.
ಬಸವರಾಜ ನಂದೆಪ್ಪನವರ
ರಬಕವಿ-ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030