ಚಳ್ಳಕೆರೆ ತಾಲೋಕು ತಹಸೀಲ್ದಾರ್, ಎನ್, ರಘುಮೂರ್ತಿ ಅವರ ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ಆರೋಗ್ಯದ ಅರಿವು ಮೂಡಿಸಲಾಯಿತು…!!!

Listen to this article

ಇಂದು ಚಳ್ಳಕೆರೆ ತಾಲೂಕಿನ ತಾಲ್ಲೂಕು ಕಚೇರಿಯ ಆಡಳಿತ ವತಿಯಿಂದ ಬೆಳಿಗ್ಗೆ 6:00 ಗಂಟೆಯಿಂದ ಚಳ್ಳಕೆರೆ ತಾಲೂಕಿನ ಗೌಡಗೆರೆ ಗ್ರಾಮ ಪಂಚಾಯಿತಿಗೆ ತಾಲ್ಲೂಕಿನ 24 ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ವ್ಯಾಕ್ಸಿನ್ ಗೆ ಬಾಕಿ ಇದ್ದಂತಹ 200 ಜನರಿಗೆ ತಹಸೀಲ್ದಾರ್ ಏನ್ ರಘುಮೂರ್ತಿ ಜನರಲ್ಲಿ ಅರಿವನ್ನು ಮೂಡಿಸಿ ಅವರಲ್ಲಿ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ ಎಂದು ತಿಳಿಸಿದರು ನಂತರ ಆರೋಗ್ಯ ಇಲಾಖೆಯ ಗಮನ ಹರಿಸಿ ಯಾರು ವ್ಯಾಕ್ಸೀನ್ ಹಾಕಿಸಿಲ್ಲವು ಅವರನ್ನು ಕರೆತಂದು ವ್ಯಾಕ್ಸಿನ್ ಹಾಕಲಾಯಿತು .
ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್ ರಘುಮೂರ್ತಿ ಆಡಳಿತ ಸಿಬ್ಬಂದಿ ಮತ್ತು ಕಾರ್ಯನಿರ್ವಹಣಾಧಿಕಾರಿಗಳಾದ ಮಡಗಿನ ಬಸಪ್ಪ , ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ ಎಸ್ ಸುರೇಶ್ ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಮೋಹನಕುಮಾರಿ ,ತಾಲ್ಲೂಕು ಆರೋಗ್ಯ ಅಧಿಕಾರಿಗಳು ಆದ ಪ್ರೇಮಸುಧಾ ,ತೋಟಗಾರಿಕಾ ಅಧಿಕಾರಿಗಳಾದ ವಿರುಪಾಕ್ಷಪ್ಪ ,ಕೃಷಿ ಅಧಿಕಾರಿಗಳಾದ ರವಿ ಅವರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ರಂಗಪ್ಪ ಮತ್ತು ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು …

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend