ದಿನಾಂಕ.7.4.2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.*.
ಕೂಡ್ಲಿಗಿ ತಾಲೂಕಿನ ಮಾನ್ಯ ತಹಸೀಲ್ದಾರರಾದ ಶ್ರೀಯುತ ಮಹಾಬಲೇಶ್ವರ ರವರಿಂದ ದೇಶದ ವ್ಯಾಪ್ತಿ ಕರೋನವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುವುದರಿಂದ ತಾಲೂಕು ಕಚೇರಿಯ ವಾಹನದ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಯಿತು.
ಪಟ್ಟಣದ ಬೀದಿಬೀದಿಗಳಲ್ಲಿ ಕಾರೋನೋ ಎರಡನೇ ಅಲೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಪಟ್ಟಣದ ನಾಗರಿಕರಿಗೆ ತಾಲೂಕು ಕಚೇರಿಗೆ ಹಾಗೂ ಕೂಡ್ಲಿಗಿ ತಾಲೂಕಿಗೆ ಕೆಲಸದ ನಿಮಿತ್ಯ ಬಂದ ಹಳ್ಳಿಯ ನಾಗರಿಕರಿಗೆಕೋವಿಡ್ ಸೋಂಕು ನಿಯಂತ್ರಣ ನಿಯಮ ಪಾಲಿಸಬೇಕು ಪಾಲಿಸದಿದ್ದಲ್ಲಿ ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಲಾಗುವುದು ಪ್ರತಿಯೊಬ್ಬ ನಾಗರಿಕರು ತಪ್ಪದೇ ಮಾಸ್ಕ್ ಧರಿಸಬೇಕು ಈ ಹಿಂದೆ ಕರೋನವೈರಸ್ ವ್ಯಾಪಕವಾಗಿ ಹರಡಿದ್ದು ಈ ವಿಚಾರವಾಗಿ ನಾವುಗಳೆಲ್ಲರೂ ಕಷ್ಟ ಪಟ್ಟಿರುವುದು ತಮಗೆಲ್ಲರಿಗೂ ತಿಳಿಯದೆ ತಿಳಿದು ತಿಳಿದು ತಪ್ಪು ದಾರಿ ತುಳಿಯಬಾರದು ಕೋವಿಡ್ ನಿಯಮ ಪಾಲಿಸಬೇಕು 45 ವರ್ಷ ಮೇಲ್ಪಟ್ಟ ವರೆಲ್ಲರೂ ವ್ಯಾಕ್ಸಿನ್ ಚುಚ್ಚುಮದ್ದನ್ನು ತಪ್ಪದೇ ಹಾಕಿಸಿಕೊಳ್ಳಿ ತಾತ್ಸಾರ ಮಾಡಬಾರದು. ಖಾಸಗಿ ವಾಹನಗಳ ಮಾಲೀಕರು ಪ್ರಯಾಣದ ಸಂದರ್ಭದಲ್ಲಿ ಕಡ್ಡಾಯವಾಗಿ ಸೋಂಕು ನಿಯಂತ್ರಣ ನಿಯಮ ಪಾಲಿಸಬೇಕು ಪ್ರತಿಯೊಬ್ಬರೂ ಮಾಸ್ಕ್ ದರಿಸಬೇಕು ಸ್ಯಾನಿಟೇಷನ್ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಯಾರೇ ತಪ್ಪು ಮಾಡಿದರೂ ಮುಲಾಜಿಲ್ಲದೆ ನಿರ್ಧಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಆದುದರಿಂದ ನಾಗರಿಕರೆಲ್ಲರೂ ಕೋರೋಣ ವೈರಸ್ ಎರಡನೇ ಅಲೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸುವುದು ಶಾನೆ ಟೇಷನ್ ಮಾಡಿಸುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮರೆಯದೇ ಕೊರೋನ ನಿಯಮಗಳನ್ನು ಪಾಲಿಸಿ ಎಂದು ಮಾನ್ಯ ತಾಸಿಲ್ದಾರರು ತಮ್ಮ ವಾಹನದಲ್ಲಿ ಸಂಚರಿಸಿ ವಾಹನದ ಧ್ವನಿವರ್ಧಕದ ಮೂಲಕ ಕರೋನ ಜಾಗೃತಿ ಸಂದೇಶ ರವಾನಿಸಿದರು. *ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030