ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು.ಕಾನಹೊಸಹಳ್ಳಿ.
ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು
ಕಾನ ಹೊಸಹಳ್ಳಿ ಗ್ರಾಮದ ಮಂಜಣ್ಣ ತಂದೆ ಮಲ್ಲಯ್ಯ(56 ವರ್ಷ) ನೇಣಿಗೆ ಶರಣಾದವ್ಯಕ್ತಿ.
ಮಂಜಣ್ಣ ತಂದೆ ಮಲ್ಲಯ್ಯ ಈತನಿಗೆಮೂರ್ಛೆರೋಗ ಬರುತ್ತಿತ್ತು,ಮೂರ್ಛೆ ರೋಗಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ದ್ದೆವು .ಈ ತನು ಆಗಿಂದಾಗೆ ಮನೆಗೆ ಮಧ್ಯಪಾನ ಮಾಡಿ ಬರುತ್ತಿದ್ದ, ಮೂರ್ಛೆರೋಗಕ್ಕೆ ಮದ್ಯಪಾನ ಮಾಡುವುದು ಸರಿಯಲ್ಲವೆಂದು ಮನೆಯವರೆಲ್ಲರೂ ಸೇರಿ ಬುದ್ಧಿವಾದ ಹೇಳಿದೆ ವು..ಮದ್ಯಪಾನ ಮಾಡುವುದು ಸರಿಯಲ್ಲವೆಂದು ಮನೆಯವರು ಬುದ್ಧಿ ಹೇಳಿದ್ದಕ್ಕಾಗಿ,ಮನನೊಂದು ದಿನಾಂಕ.9.1.2022 ರಂದು, ಕಾನಹೊಸಹಳ್ಳಿಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ,ಹೊಸಕಟ್ಟೆ ಸರದ ಹತ್ತಿರವಿರುವ ಜಾಲಿ ಮರದ ಕೊಂಬೆಗೆ ತನ್ನ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಎಂದು ಮೃತನ ಮಗನಾದ ಪ್ರಭುರವರ ಕೊಟ್ಟ ದೂರಿನಂತೆ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಕಾನಹೊಸಹಳ್ಳಿ ಪಿಎಸ್ಐ ತಿಮ್ಮಣ್ಣ ಚಾಮನೂರು ರ ವರು ತನಿಖೆ ಕೈಗೊಂಡಿದ್ದಾರೆ.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030