ಮಳೆರಾಯನ ಮುನಿಸು ರೈತರು ಕಂಗಾಲು !!!!!!!!! ವಿಜಯನಗರ ಜಿಲ್ಲೆ :- ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಹೋಬಳಿಯ ಸಮೀಪದ ಬಯಲುತುಂಬರಗುದ್ದಿ ಗ್ರಾಮದ ರೈತ ಉಡದಳ್ಳಿ ಬಸವರಾಜ್ ಅವರು ಬೆಳೆದು ನಿಂತ ಮೆಕ್ಕೇಜೋಳದ ಫಸಲು ಈ ಬಾರಿ ಮಳೆರಾಯನ ಮುನಿಸಿಗೆ ಮೆಕ್ಕೇಜೋಳ ಒಣಗಿ ನಿಂತಿದೆ ಎಂದು ರೈತ ಬಸವರಾಜ್ ಅಲವತ್ತುಕೊಂಡಿದ್ದಾರೆ. ಮಳೆ ಕೈಕೊಟ್ಟು ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆಗೊಂಡ ಮೆಕ್ಕೇಜೋಳ , ಸೂರ್ಯಕಾಂತಿ ,ಸಜ್ಜೆ ಬೆಳೆಗಳು ಸಂಪೂರ್ಣ ಒಣಗಲಾರಂಬಿಸಿದ್ದು ಎದೆ ಎತ್ತರಕ್ಕೆ ಬೆಳೆದು ನಿಂತ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು ರೈತರ ಗೋಳು ಹೇಳತೀರದಾಗಿದ್ದು ರೈತರು ಮುಗಿಲು ನೋಡುವ ಪರಿಸ್ಥಿತಿಯಿಂದ ಚಿಂತೆಗೆ ಕಾರಣರಾಗಿದ್ದಾರೆ . ಸುಮಾರು 24,000 ಹೆಕ್ಟೇರ್ ಕೃಷಿ ಭೂಮಿಯಲ್ಲಿ 8,630 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ , 7,324 ಹೆಕ್ಟೇರ್ ಮೆಕ್ಕೇಜೋಳ , 1,852 ಹೆಕ್ಟೇರ್ ರಾಗಿ , 950 ಹೆಕ್ಟೇರ್ ಸೂರ್ಯಕಾಂತಿ , 416 ಹೆಕ್ಟೇರ್ ನವಣೆ, 360, ಹೆಕ್ಟೇರ್ ಬಿಳಿಜೋಳ ಬಿತ್ತನೆಯಾಗಿದೆ. ಒಂದು ತಿಂಗಳಿಂದ ಮಳೆಯಾಗದ ಕಾರಣ ಹೋಬಳಿ ವ್ಯಾಪ್ತಿಯಲ್ಲಿ ಶೇಂಗಾ ಬಿತ್ತನೆಗೆ ಹಿನ್ನಡೆಯಾಗಿದೆ ,ಸಾಲ ಮಾಡಿ ಬಿತ್ತನೆ ಬೀಜಗಳನ್ನು ಖರೀದಿ ಮಾಡಿ ರೈತರು ಧೈರ್ಯದಿಂದ ಬಿತ್ತನೆ ಮಾಡಿರುವ ಬೆಳೆಗಳು ಸಂಪೂರ್ಣ ಒಣಗುತ್ತಿವೆ , ಮಳೆರಾಯನ ಮುನಿಸಿನಿಂದ ಹೊಲಗಳು ಬರಡಾಗುತ್ತಿವೆ ಎನ್ನುತ್ತಾರೆ ರೈತ ನಾಗರಾಜ . ಮಳೆಯನ್ನೇ ನಂಬಿದ ರೈತರ ಜೀವನಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ , ಬಿತ್ತನೆ ಗೊಂಡ ಶೇಕಡ 60ರಷ್ಟು ಬೆಳೆ ಭೂಮಿಯಲ್ಲಿ ಒಣಗುತ್ತಿದ್ದು ಸದ್ಯ ಮಳೆ ಆದರೆ ಹಿಂಗಡ ಬಿತ್ತನೆಯಾದ ಶೇಖಡ 30ರಷ್ಟು ಬೆಳೆ ಕೈ ಸೇರಲಿದ್ದು , ಇರುವ ಫಸಲು ಬಂದರೆ ಸ್ವಲ್ಪ ಪ್ರಮಾಣದಲ್ಲಿ ಜಾನುವಾರುಗಳಿಗಾದರೂ ಮೇವಾಗಲಿದೆ ಎನ್ನುತ್ತಾರೆ ರೈತರು . ಜಾನುವಾರಗಳ ಮೇವಿನ ಸಮಸ್ಯೆ ರೈತರಿಗೆ ಚಿಂತೆಗೀಡು ಮಾಡಿದೆ, ಇರುವ ದನಕರುಗಳನ್ನು ಮೇಯಿಸಲು ಆಗದೆ ಮಾರಾಟ ಮಾಡಲು ಮನಸ್ಸು ಒಪ್ಪುತ್ತಿಲ್ಲ ಆದರೆ ಬೇರೆ ಮಾರ್ಗವಿಲ್ಲ ಎಂದು ಬಯಲುತುಂಬರಗುದ್ದಿ ರೈತ ಕೊಟ್ರೇಶ್ ಅಲವತ್ತುಕೊಂಡಿದ್ದಾರೆ . ಮಳೆ ಇಲ್ಲದೆ ಬೆಳೆಗಳು ಒಣಗಲಾರಂಭಿಸಿವೆ, ಬೆಳೆ ಸಮೀಕ್ಷೆಯ ಬಳಿಕ ನಷ್ಟದ ಪ್ರಮಾಣ ತಿಳಿಯಲಿದೆ ಎಂದು ಕಾನಹೊಸಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಟಿ .ಚೈತ್ರ ತಿಳಿಸಿದರು…
ವರದಿ, ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030